Saturday, December 18, 2010

Kann anchina ee maatali

ಸಾಹಿತ್ಯ:
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ದಾರಿ ತಪ್ಪಿದ ಮಗ

ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ ||೨||
ಕವಿ ಕಾಣದ ಶೃಂಗಾರದ ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ

ನವ ಯವ್ವನ ಹೊಂಗನಸಿನ ಮಳೆಬಿಲ್ಲು ತಂದಿದೆ
ನಸುನಾಚುತೆ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೆ,
ನೂರಾಸೆಯ ನೆಲೆಯಾಗಿರೆ ಮಧುಚಂದ್ರದ ಮಧುಮೈತ್ರಿಯ ನಿರೀಕ್ಷೆ ಅಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ
ಕವಿ ಕಾಣದ ಶೃಂಗಾರದ ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ

ಪ್ರತಿ ಪ್ರೇಮಿಯ ಬಾಳಲ್ಲಿಯು ಶುಭರಾತ್ರಿ ಒಂದಿದೆ
ಅನುರಾಗದ ಆ ವೇಳೆಗೆ ಮನಕಾದು ನಿಂತಿದೆ
ಸರಿಜೋಡಿಯ ಕಣ್ಣರಸಿದೆ
ಈ ಜೋಡಿಯು ಸವಿನೆನಪಲಿ ಜಗವನ್ನೇ ಮರೆತಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ
ಕವಿ ಕಾಣದ ಶೃಂಗಾರದ ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ

Monday, October 11, 2010

Ee Bhoomi Bannada buguri

ಸಾಹಿತ್ಯ: ಹಂಸಲೇಖ
ಗಾಯಕರು: ಎಸ.ಪಿ.ಬಾಲಸುಬ್ರಮಣ್ಯಂ
ಚಿತ್ರ: ಮಹಾಕ್ಷತ್ರಿಯ

ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ ||೨||
ಈ ಬಾಳು ಸುಂದರಿ ನಗರಿ, ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರಿ ನಗರಿ, ನೀನಿದರ ಮೇಟಿ ಕಣೋ

ಮರಿಬೇಡ ತಾಯಿಯ ಋಣವ, ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ
ಸುಖವಾದ ಭಾಷೆಯ ಕಲಿಸೊ, ಸರಿಯಾದ ದಾರಿಗೆ ನಡೆಸೋ
ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರಿ ನಗರಿ, ನೀನಿದರ ಮೇಟಿ ಕಣೋ

ಮರಿಬೇಡ ಮಗುವಿನ ನಗುವ, ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೆ
ಕಳಬೇಡ ಕೊಲ್ಲಲು ಬೇಡ, ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರಿ ನಗರಿ, ನೀನಿದರ ಮೇಟಿ ಕಣೋ

Saturday, August 7, 2010

Madhuvana karedare

ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕರು: ವಾಣಿ
ಚಿತ್ರ: ಇಂತಿ ನಿನ್ನ ಪ್ರೀತಿಯ

ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ ||೨||
ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯಮುರಿದು, ಬಾ ಬಳಿಗೆ ಎಂದಿದೆ
ಶರಣಾಗು ಆದರೆ, ಸೆರೆಯಾಗು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

ಓ... ಕಂಗಳಲಿ ಕನಸಿನ ಕುಲುಮೆ, ಹೊಳೆಯುತಿದೆ ಜೀವದ ಒಲುಮೆ, ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು, ಹೆಸರೆಲ್ಲೋ ಹೋಗಿದೆ ಮರೆತು, ನಾನ್ಯಾರು ಹೇಳು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

ಮನಸಿನ ಹಸಿ ಬಣ್ಣಗಲ್ಲಿ, ನೀನೆಳೆವ ರೇಖೆಗಳಲ್ಲಿ, ನಾ ಮೂಡಬೇಕು ಆದರೆ
ಎದುರಿದ್ದು ಕರೆಯುವೆ ಏಕೆ, ಜೊತೆಯಿದ್ದು ಮರೆಯುವೆ ಏಕೆ, ನಿನ್ನೊಲವು ನಿಜವೆ ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ
ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯಮುರಿದು, ಬಾ ಬಳಿಗೆ ಎಂದಿದೆ
ಶರಣಾಗು ಆದರೆ, ಸೆರೆಯಾಗು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

Aagadu Endu Kailaagadu Endu

ಸಾಹಿತ್ಯ: ಆರ್.ಎನ್.ಜಯಗೋಪಾಲ್.
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬಂಗಾರದ ಮನುಷ್ಯ

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಆಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕೆತ್ತಲಾದು ಕಗ್ಗಲ್ಲೆಂದು ಎದೆಗೊಂದಿದ್ದರೆ ಶಿಲ್ಪಿ ||೨||
ಆಗುತ್ತಿತ್ತೇ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೇಬೀಡು ||೨||
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕಾವೇರಿಯನು ಹರಿಯಲು ಬಿಟ್ಟು ||೨||
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು
ಅಹ ಬಂಗಾರ ಬೆಳೆವ ಹೊನ್ನಾಡು
ಆಗುತ್ತಿತ್ತೇ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕೈಕೆಸರಾದೆರೆ ಬಾಯ್ಮೊಸರೆಂಬ ಹಿರಿಯರ ಅನುಭವ ಸತ್ಯ, ಇದ ನೆನಪಿಡಬೇಕು ನಿತ್ಯ ||೨||
ದುಡಿಮೆಯ ನಂಬಿ ಬದುಕು ||೨||
ಅದರಲೇ ದೇವರ ಹುಡುಕು, ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

Friday, August 6, 2010

ನಗುನಗುತಾ ನಲಿ ನಲಿ, ಏನೇ ಆಗಲಿ/ Nagunagutaa Nali Nali ene aagali

ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬಂಗಾರದ ಮನುಷ್ಯ


ಆಹಾಹ ಆಹಾಹ ಆಹಹಹಾ
ನಗುನಗುತಾ ನಲಿ ನಲಿ ಎಲ್ಲಾ ದೇವನ ಕಲೆ ಎಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ, ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲೂ ರಸದೌತಣ ನಿನಗೆಲ್ಲೆಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ತಾಯಿ ಒಡಲಿನ, ಕುಡಿಯಾಗಿ ಜೀವನ ||೨||
ಮೂಡಿಬಂದು ಚೇತನ, ತಾಳಲೆಂದು ಅನುದಿನ
ಅವಳೆದೆ ಅನುರಾಗ, ಕುಡಿಯುತ ಬೆಳದಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ಗೆಳಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವದು ||೨||
ಮುಂದೆ ಯವ್ವೌನ , ಮದುವೆ ಬಂಧನ
ಎಲ್ಲೆಲು ಹೊಸ ಜೀವನ, ಅಹ ಎಲ್ಲೆಲು ಹೊಸ ಜೀವನ
ಜೋತೆಯದು ದೊರೆತಾಗ ||೨|
ಮೈಮನ ಮರೆತಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ ||೨||
ಸಾಗಿ ಮಾಗಿ ಹಿರಿತನ , ತಂದಿತಯ್ಯ ಮುದಿತನ
ಅದರೊಳು ಹೊಸದಾದ, ರುಚಿ ಇದೆ ಸವಿನೋಡ
ನಗುನಗುತಾ ನಲಿ ನಲಿ, ಏನೇ ಆಗಲಿ

Madhuram Maduram ..MalayaMaaruta

ಸಾಹಿತ್ಯ: ವಲ್ಲಭಾಚಾರ್ಯ
ಗಾಯಕರು: ವಾಣಿಜಯರಾಂ & ಎಸ್.ಪಿ.ಬಾಲಸುಬ್ರಮಣ್ಯಂ
ಚಿತ್ರ: ಮಲಯಮಾರುತ
ಸ ...
ಅಧರಂ ಮಧುರಂ ವದನಂ ಮಧುರಂ ನಯನಂ ಮಧುರಂ ಹಸಿತಂ ಮಧುರಂ
ಮಧುರಂ ಮಧುರಂ
ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ರಿ ...
ವಚನಂ ಮಧುರಂ ಚರಿತಂ ಮಧುರಂ ವಸನಂ ಮಧುರಂ ಫಲಿತಂ ಮಧುರಂ
ಮಧುರಂ ಮಧುರಂ
ಚಲಿತಂ ಮಧುರಂ ಭ್ರಮಿತಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಗ....
ವೇಣುಃ ಮಧುರಃ ರೇಣುಃ ಮಧುರಃ ಪಾಣಿಃ ಮಧುರಃ ಪಾದೌ ಮಧುರೌ
ಮಧುರೌ ಮಧುರೌ
ನೃತ್ಯಂ ಮಧುರಂ ಸಖ್ಯಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಮ.....
ಗೀತಂ ಮಧುರಂ ಪೀತಂ ಮಧುರಂ ಭುಕ್ತಂ ಮಧುರಂ ಸುಖ್ತಂ ಮಧುರಂ
ಮಧುರಂ ಮಧುರಂ
ರೂಪಂ ಮಧುರಂ ತಿಲಕಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಪ....
ಕರಣಂ ಮಧುರಂ ತರಣಂ ಮಧುರಂ ಹರಣಂ ಮಧುರಂ ರಮಣಂ ಮಧುರಂ
ಮಧುರಂ ಮಧುರಂ
ಪಮಿತಂ ಮಧುರಂ ಶಮಿತಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ದ....
ಗುಂಜಾ ಮಧುರ ಮಾಲ ಮಧುರ ಯಮುನಾ ಮಧುರ ವೀಚಿ ಮಧುರ
ಮಧುರ ಮಧುರ
ಸಲಿಲಂ ಮಧುರಂ ಕಮಲಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ನಿ...
ಗೋಪಿ ಮಧುರ ಲೀಲಾ ಮಧುರ ಯುಕ್ತಂ ಮಧುರಂ ಭುಕ್ತಂ ಮಧುರಂ
ಮಧುರಂ ಮಧುರಂ
ಇಷ್ಟಂ ಮಧುರಂ ಶಿಷ್ಟಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಸ...
ಗೋಪಾ ಮಧುರ ಗಾವೋ ಮಧುರ ಎಷ್ಟಿರ್ ಮಧುರ ಸೃಷ್ಟಿರ್ ಮಧುರ
ಮಧುರ ಮಧುರ
ದಲಿತಂ ಮಧುರಂ ಫಲಿತಂ ಮಧುರಂ ಮಧುರಾಧಿಪತೆ ಹೇ ರಖಿಲಂ ಮಧುರಂ
ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ

Enaagali Munde Saagu ni

ಸಾಹಿತ್ಯ: ವಿ.ಶ್ರೀಧರ್
ಗಾಯಕರು: ಸೋನು ನಿಗಮ್
ಚಿತ್ರ: ಮುಸ್ಸಂಜೆ ಮಾತು

ಆಹಾ ಆಹಾ ....
ಏನಾಗಲಿ ಮುಂದೆ ಸಾಗು ನೀ, ಬಯಸಿದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ, ಓ.... ನನ್ನಾಣೆ ನನ್ನ ಮಾತು ಸುಳ್ಳಲ್ಲ
ನನ್ನಾಣೆ ನನ್ನ ಮಾತು ಸುಳ್ಳಲ್ಲ ||೨||
ಆಹಾ ಆಹಾ....

ಚಲಿಸುವ ಕಾಲವು ಕಲಿಸುವ ಪಾಠವ ಮರೆಯಬೇಡ ನೀ ತುಂಬಿಕೊ ಮನದಲಿ ||೨||
ಇಂದಿಗೋ ನಾಳೆಗೋ ಮುಂದಿನಾ ಬಾಳಲಿ ಗೆಲ್ಲುವಂತ ಸ್ಫೂರ್ತಿ ದಾರಿದೀಪ ನಿನಗೆ ಆ ಅನುಭವ ||೨||
ಏನಾಗಲಿ ಮುಂದೆ ಸಾಗು ನೀ, ಬಯಸಿದೆಲ್ಲ ಸಿಗದು ಬಾಳಲಿ ||೨||
ಬಯಸಿದೆಲ್ಲ ಸಿಗದು ಬಾಳಲಿ, ಹೋ ನನ್ನಾಣೆ ನನ್ನ ಮಾತು ಸುಳ್ಳಲ್ಲ
ಹೋ ನನ್ನಾಣೆ ನನ್ನ ಮಾತು ಸುಳ್ಳಲ್ಲ

ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ, ದಯವತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ, ಸಿಲುಕಿದ ಜೀವಕೆ, ಜೀವ ನೀಡು ಬಾ ಹೃದಯವೇ ದೈವವು
ಹರಿಸಿದ ಕೈಗಳು ನಮ್ಮನು ಬೆಳಸುತ, ವಿಧಿಯ ಬರಹವಾಗಿ ಮೌನದಲ್ಲೇ ನಮ್ಮನು ಕಾಯುತ
ಪ್ರತಿಫಲ ಬಯಸದೆ ತೋರಿದ ಕರುಣೆಯು ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವುದು
ನೆಮ್ಮದಿ ತರುವುದು
ಏನಾಗಲಿ ಮುಂದೆ ಸಾಗು ನೀ, ಪ್ರೀತಿಗಾಗೆ ಬದುಕು ಬಾಳಲಿ, ಪ್ರೀತಿಗಾಗೆ ಬದುಕು ಬಾಳಲಿ
ನನ್ನಾಣೆ ಪ್ರೀತಿಯಂದು ಸುಳ್ಳಲ್ಲ ||೨||
ಆಹಾ ಆಹಾ ....
ಲಲಲಾ ಲಾಲಾ .....

Thursday, August 5, 2010

Taaye Shaarade Lokapoojite

ಸಾಹಿತ್ಯ: ಸಾಹಿತ್ಯ ರತ್ನ ಚಿ.ಉದಯಶಂಕರ್
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬೆಟ್ಟದ ಹೂವು

ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲುಹು ಮಾತೆ, ನೀಡು ಸನ್ಮತಿ ಸೌಖ್ಯದಾತೆ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ಅಂಧಕಾರವ ಓಡಿಸು,ಜ್ಞಾನಜ್ಯೋತಿಯ ಬೆಳಗಿಸು
ಹೃದಯಮಂದಿರದಲ್ಲಿ ನೆಲೆಸು,ಚಿಂತೆಯ ಅಳಿಸು
ಶಾಂತಿಯ ಉಳಿಸು
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ನಿನ್ನ ಮಡಿಲಿನ ಮಕ್ಕಳಮ್ಮ,ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ,ಬಾಳನು ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ಒಳ್ಳೆ ಮಾತುಗಳಾಡಿಸು,ಒಳ್ಳೆ ಕೆಲಸವಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು,ವಿದ್ಯೆಯ ಕಲಿಸು
ಆಸೆ ಪೂರೈಸು
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲುಹು ಮಾತೆ,ನೀಡು ಸನ್ಮತಿ ಸೌಖ್ಯದಾತೆ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಜ್ಞಾನದಾತೆ ನಮೋಸ್ತುತೆ

Wednesday, August 4, 2010

ಅರಳುವ ಹೂವುಗಳೇ ಆಲಿಸಿರಿ / Araluva hoovugale aalisiri

ಸಾಹಿತ್ಯ      : ಕೆ.ಕಲ್ಯಾಣ್
ಗಾಯಕರು  : ಚಿತ್ರ




ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ ||೨||
ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನಿ ಅಳುಕದಿರು, ಮಳೆಯೋ ಭರ ಸಿಡಿಲೋ ನಿ ನಡೆಯುತಿರು

ಮನಸು ಎಂಬ ಕನ್ನಡಿಯು ಒಡೆದು ಹೋಗಬಾರದು
ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲ, ಯಾರಿಗಿಲ್ಲಿ ಸಾವಿಲ್ಲ
ಕಾಲ ಕಳೆದ ಹಾಗೆ ಎಲ್ಲ ಮಾಯವಾಗುವಂತದು
ಉಳಿಪೆಟ್ಟು ಬೀಳುವ ಕಲ್ಲೇ ಶಿಲೆಯಾಗಿ ನಿಲ್ಲುವುದು
ದಿನ ನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ, ಯಾರಿಗಿಲ್ಲ ಪರೆದಾಟ
ನಮ್ಮ ಪ್ರತಿ ಕನಸು ಇಲ್ಲಿ ನನಸಾಗೋ ಒಳ್ಳೆ ಕಾಲವು ಮುಂದೆ ಇದೆ
ಮನವೇ ಓ ಮನವೇ ನಿ ಕುಗ್ಗದಿರು
ಬೆಟ್ಟ ಬಯಲಿರಲಿ ನಿ ನುಗ್ಗುತಿರು
ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ

ನೋವು ನಲಿವು ಅನ್ನೋದು, ಬಾಳ ರೈಲು ಕಂಬಿಗಳು
ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ, ಧ್ಯೇಯವೊಂದು ಜೊತೆಗಿರಲಿ
ಏಳುಬೀಳು ಎಲ್ಲಾ ದಾಟಿ, ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ
ನಾವೆಲ್ಲರೂ ಎಂದು ಒಂದೇ ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ, ನಿನ್ನ ಜೊತೆಯಿರಲು ಆಕಾಶವೇ ಅಂಗೈಲಿ
ಮನವೇ ಓ ಮನವೇ ನಿ ಬದಲಾಗು
ಏನೇ ಸಾಧನೆಗೂ ನಿ ಮೊದಲಾಗು

ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ,
ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನಿ ಅಳುಕದಿರು, ಮಳೆಯೋ ಭರ ಸಿಡಿಲೊ ನಿ ನಡೆಯುತಿರು

Tappu maadador yaaravre

ಸಾಹಿತ್ಯ      : ವಿ.ಮನೋಹರ್
ಗಾಯಕರು   : ಸಿ.ಅಶ್ವಥ್



ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||
ಅಪ್ಪಿತಪ್ಪಿ ತಪ್ಪಾಗುತ್ತೆ, ಬೆಳ್ಳಿ ಕೂಡ ಕಪ್ಪಾಗುತ್ತೆ , ತಿದ್ಕೋಳ್ಳೋಕೆ ದಾರಿ ಐತೆ ಹೇ ಹೇ ಹೇ ....
ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||

ಘಮ ಘಮ ಕಂಪು ತರುವ ಗಾಳಿ ಕೂಡ, ಗೊಬ್ಬು ನಾತ ತರೋದಿಲ್ವಾ
ಪರಮ ಪಾವನೆ ಗಂಗೆಯಲ್ಲಿ ಕೂಡ ಹೆಣಗಳು ತೆಲೋದಿಲ್ವಾ
ಕಳ್ರನೆಲ್ಲ ಜೈಲಿಗೆ ಹಾಕೋದಾದ್ರೆ, ಭೂಮಿಗೆ ಬೇಲಿ ಹಾಕಬೇಕಲ್ವಾ ||೨||
ತೀರ್ಥ ಕುಡುದ್ರು ಶೀತಾಗಲ್ವ, ಮಂಗ್ಳಾರ್ರ್ತೀನು ಸುಡೋದಿಲ್ವ
ದೇವ್ರುಗಳೇ ತಪ್ಮಾಡಿಲ್ವಾ ....ಅ ಆ ಆ .....

ಹೆಣ್ಣುಹೊನ್ನುಮಣ್ಣು ಮೂರರಿಂದ್ಲೇ ಎಲ್ಲಾರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೋದ್ಬಿಟ್ಟು, ಪರರ ಸ್ವತ್ತಿಗ್ಯಾಕೆ ಪಟ್ಟು
ಮೆಳ್ಳಗಣ್ಣು ಇದ್ದರು ತಪ್ಪಿಲ್ಲ, ಕಳ್ಳಗಣ್ಣು ಇರಬಾರ್ದು ||೨||
ಕದಿಯೋದಾದ್ರೆ ವಿದ್ಯೆ ಕದಿ, ಕೊಂದೆಬಿಡು ಕೇಡು ಬುದ್ದಿ, ಲದ್ದಿ ಬುದ್ಧಿ ಮಾಡು ಶುದ್ಧಿ ಇಇಇಇ.... ಹೇ

ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||
ನಾವು ನೀವು ಎಲ್ಲ ಒಂದೇ, ತಪ್ಪು ಮಾಡೋ ಕುರಿ ಮಂದೆ
ತಿದ್ಕೋಳ್ಳೋಕೆ ದಾರಿ ಐತೆ ಮುಂದೆ ಹೇ ಹೇ ಹೇ .....

Saturday, July 31, 2010

Naanu hottare edbuttu, ninmaare nodbuttu

ಗಾಯಕರು: ರಾಜು ಅನಂತಸ್ವಾಮಿ
ಸಾಹಿತ್ಯ: ವಿ.ಮನೋಹರ್
ಚಿತ್ರ: ರಿಷಿ

ನಾನು ಹೊತ್ತಾರೆ ಎದ್ಬುಟ್ಟು, ನಿನ್ಮಾರೆ ನೋಡ್ಬುಟ್ಟು, ಕೈಜೋಡ್ಸಿ ನಿಲ್ತಿನ್ಕಣೆ
ಬೇಗ ಬೆಡ್ ಕಾಫಿ ತಂದ್ಬುಟ್ಟು, ನಿನ್ಕಾಲ ಒತ್ಬುಟ್ಟು, ಬಗ್ ಬಗ್ಸಿ ಕೊಡ್ತೀನ್ ಕಣೆ
ಕಾಫಿ ಸೀಗಿಲ್ಲ ಅನತಾನಿ ಓದ್ಬುಟ್ರೇ ನಿನ್ಬೆರಳ ಕಪಲ್ಲಿ ಅದ್ತೀನ್ ಕಣೆ
ಈ ಸಕ್ಕ್ರೆಯ ಗೊಂಬೆಗೆ ಸಕ್ಕರೆ ಯಾಕಂತ ಅಂದ್ಬುಟ್ಟು ಗೀಣ್ತೀನ್ ಕಣೆ
i love you i love you da i really love you da i truly love you da ಹೇ ಹೇ

ನಿಂಗೆ ವೊಳ್ಳೆಣ್ಣೆ ಹಚ್ಬುಟ್ಟು ಮೈಯೆಲ್ಲಾ ನೀವ್ಬುಟ್ಟು ನಿಟ್ಗೆ ತೆಗಿತೀನ್ ಕಣೆ
ಜಳ್ಕ ಮಾಡ್ಸುತ್ತ ಮಾಡ್ಸುತ್ತ ಬೆಳ್ ಬೆಳ್ಳೆ ಬೆನ್ನನ ಮುದ್ದಡ್ತಾ ತಿಕ್ತೀನ್ ಕಣೆ
ಖೀರು ಉಪ್ಪಿಟ್ಟು ಒಬಟ್ಟು ನಿಪಟ್ಟು ತಂಬಿಟ್ಟು ಎಲ್ಲಾನ ಮಾಡ್ತೀನ್ ಕಣೆ
ನಿನ್ನ ಮಡ್ಳಲ್ಲಿ ಕೂರ್ಸ್ಕೊಂಡು ಸೊಂಟನ ತಪ್ಕೊಂಡು ತುತ್ ತುತ್ತು ತಿನ್ ಸ್ತೀನ್ ಕಣೆ
i love you i love you da i really love you da i truly love you da ಹೇ ಹೇ

ಅಹಾ ಸಂತೆಗೆ ಕರ್ಕೊಂಡು, ಸೀರೆಯ ಕೊಂಡ್ಕೊಂಡು, ನಿಂಗ್ ಉಡ್ಸಿ ನೋಡ್ತೀನ್ ಕಣೆ
ಅಲ್ಲಿ ತೊಟ್ಲಲ್ಲಿ ಕುತ್ಕಂಡು, ಮಂಡಕ್ಕಿ ತಿನ್ಕಂಡು, ಎತ್ಕಂಡೆ ಬರ್ತೀನ್ ಕಣೆ
ಅಹಾ ಬೆಳದಿಂಗಳ್ ರಾತ್ರೆಲಿ, ಮುಂಜಾನೆ ಜೋಕಾಲಿ ಅಂಗ್ಳನೆ ಮಲ್ಗೋ ಕೋಣೆ
ಇಂಥ ಮುಂಗೋಪ ಬಿಟ್ಬುಟ್ಟು , ಇನ್ನಾದ್ರು ನಮ್ಬುಟ್ಟು ಬಾಬಾರೆ ನನ್ನ ಜಾಣೆ
i love you i love you da i really love you da i truly love you da ಹೇ ಹೇ

url: http://www.youtube.com/watch?v=lPHnb0u0RDg&feature=related

Tuesday, July 27, 2010

Ede tumbi haaduvenu

ಸಾಹಿತ್ಯ: ಶ್ರೀ ಜಿ.ಎಸ್.ಶಿವರುದ್ರಪ್ಪ
ಗಾಯಕರು: ನಂದಿತಾ
ಚಿತ್ರ: ಪ್ಯಾರಿಸ್ ಪ್ರಣಯ

ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು ||೨||
ಎದೆ ತುಂಬಿ ಹಾಡಿದೆನು ಅಂದು ನಾನು
ಇಂದು ನಾ ಹಾಡಿದರೂ ಅಂದಿನಂತೆ ಕುಳಿತು, ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ||೨||
ಹಾಡು ಹಕ್ಕಿಗೆ ಬೇಕೇ...ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ
ಎದೆ ತುಂಬಿ ಹಾಡಿದೆನು ಅಂದು ನಾನು
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ..... ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ...
ಯಾರು ಕಿವಿ ಮುಚ್ಚಿದರು ,ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಎದೆ ತುಂಬಿ ಮನ ತುಂಬಿ ತನು ತುಂಬಿ ಹಾಡಿದೆನು ನಾನು ... ನಾನು ....

Gelati Baaradu intha samaya

ಗಾಯಕರು: ಡಾ.ರಾಜಕುಮಾರ್
ಸಾಹಿತ್ಯ: ಚಿ.ಉದಯಶಂಕರ್
ಚಿತ್ರ: ಎರಡು ನಕ್ಷತ್ರಗಳು

ಗೆಳತಿ ಬಾರದು ಇಂಥಾ ಸಮಯ ...||೨||
ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂಥಾ ಸಮಯ
ನೋಡು ಹಿತವಾಗಿ ತಂಗಾಳಿ ಬಿಸಿ, ಹೂವ ಕಂಪನ್ನು ಎಲೆಲ್ಲೂ ಹಾಸಿ ...||೨||
ಮೈಗೆ ಸೋಕಿ ತಂಪನ್ನು ಬೆರಸಿ ...
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ ...||೨||
ಹಿತವಾದ ನೋವಿಂದ ನಾ ಬೆಂದೆ
ಗೆಳತಿ ಬಾರದು ಇಂಥಾ ಸಮಯ
ಮನದಾಸೆ ನೀನೇತಕೆ ಕಾಣೆ , ನಿನ್ನಾಸೆ ಅದೇನಿದೆ ಜಾಣೆ ...||೨||
ಚೆಲುವೆ ತಾಳೆನು ಇನ್ನೂ ವಿರಹ , ಯೆದಯ ತುಂಬಿದೆ ನಿನ್ನಾ ಮೋಹ
ಒಲವಿಂದ ನೀ ಬಾರೆಯ ಸನಿಹ ,
ಗೆಳತಿ ಬಾರದು ಇಂಥಾ ಸಮಯ, ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂಥಾ ಸಮಯ ............

Sunday, July 25, 2010

Baare Baare Chendada Cheluvina taare

ಗಾಯಕರು: ಪಿ.ಬಿ.ಶ್ರೀನಿವಾಸ್
ಸಾಹಿತ್ಯ: ವಿಜಯನಾರಸಿಂಹ
ಚಿತ್ರ: ನಾಗರಹಾವು

ಬಾರೆ ಬಾರೆ ಚೆಂದದ ಚೆಲುವಿನ ತಾರೆ, ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ, ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ ||೨||
ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ, ಮೌನ ಗೌರಿಯ ಮೋಹದ ಕೈ ಬಿಡಲಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಒಲವಿನ ಚಿಲುಮೆಯ ಧಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
ಕೈ ಬಳೆ ನಾದದ ಗುಂಗನು ಅಳಿಸಲಾರೆ, ಮೈಮನ ಸೋಲುವ ಮತ್ತನು ಮರೆಯಲಾರೆ ||೨||
ರೂಪಸಿ ರಂಭೆಯಾ ಸಂಘವ ತೊರೆಯಲಾರೆ, ಮೌನ ಗೌರಿಯ ಮೋಹದ ಕೈ ಬಿಡಲಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಒಲವಿನ ಚಿಲುಮೆಯ ಧಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ

Yaava mohana murali kareyitu

ಸಾಹಿತ್ಯ: ಗೋಪಾಲಕೃಷ್ಣ ಅಡಿಗ
ಗಾಯಕರು: ಸಂಗೀತ ಹಾಗು ರಾಜು ಅನಂತಸ್ವಾಮಿ
ಚಿತ್ರ: ಅಮೇರಿಕ ಅಮೇರಿಕ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ||೨||
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದಿ ವಿಂಗಣ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ವಿವಷವಾಯಿತು ಪ್ರಾಣ ಹ ...
ವಿವಷವಾಯಿತು ಪ್ರಾಣಹ ಪರವಶವು ನಿನ್ನ ಈ ಚೇತನ ||೨||
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ...
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ...

Maanikya Veena Mupalaalayanteem

ಕಾಳಿಮಾತೆಯ ಗುಣಗಾನ ....

ಚಿತ್ರ: ಕವಿರತ್ನ ಕಾಳಿದಾಸ
ಗಾಯಕರು: ಡಾ.ರಾಜಕುಮಾರ್


ಮಾಣಿಕ್ಯವೀಣ ಮುಪಲಾಲಯಂತೀಂ ಮದಾಲಸಾಂ ಮಂಜುಳವಾದ್ವಿಲಾಸಾಂ ||೨||
ಮಾಹೇಂದ್ರನೀಲದ್ಯುತಿ ಕೋಮಲಾಂಗೀಂ ||೨||
ಮಾತಂಗಕನ್ಯಾಂ ಮನಸಾ ಸ್ಮರಾಮಿ ಮನಸಾ ಸ್ಮರಾಮಿ

ಚತುರ್ಭುಜೆ ಚಂದ್ರಕಳಾವತಂಸೆ ಕುಚೋನ್ನತೆ ಕುಂಕುಮರಾಗಶೋಣೆ ||೨||
ಉಂಡ್ರೇಕ್ಷುಪಾಶಾಂಕುಶ ಪುಷ್ಪಬಾಣ ಹಸ್ತೇ ನಮಸ್ತೆ ಜಗದೇಕಮಾತಹಾ

ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ
ಆಆ .....
ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ
ಕುರ್ಯಾತ್ಕಟಾಕ್ಷಂ ಕಲ್ಯಾಣಿ ಕದಂಬ ವನವಾಸಿನಿ
ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ ಕುರ್ಯಾತ್ಕಟಾಕ್ಷಂ ಕಲ್ಯಾಣಿ ಕದಂಬ ವನವಾಸಿನಿ
ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೆ ಜಯ ನೀಲಾಶುಕಪ್ರಿಯೇ ....

ಸುಧಾಸಮುದ್ರಾಂತಹೃದ್ಯನ್ಮಣಿದ್ವೀಪಸಮ್ರೂಢಬಿಲ್ವಾಟಲಿಮಧ್ಯಕಲ್ಪದ್ರುಮಾಕಲ್ಪಕಾದಂಬಕಾಂತಾರವಾಸಪ್ರಿಯೇ
ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ
ವಲ್ಲಕಿವಾಲನ್ಪ್ರಕ್ರಿಯಲೋಲತಾಲೀನನಾಬದ್ಧತಾಟಂಕಭೂಷಾವಿಶೇಷಾನ್ವಿತೆ ಸಿದ್ಧಸಮ್ಮಾನಿತೆ

ದೇವದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ಬಗ್ನಿ ಕೊಟೀರಮಾಣಿಕ್ಯ
ಸಂಗೃಷ್ಟ ಬಾಲತಪೋತ್ತಾಮಲಾಕ್ಷಾರಸಾರುಣ್ಯ ಲಕ್ಷ್ಮಿಗೃಹೀತಾಂಕ್ರಿ ಪದ್ಮದ್ವಯೇ ಅದ್ವಯೇ
ತೂ ಚಿರನವರತ್ನಪೀಠಸ್ತಿತೆ ಸುಸ್ತಿತೇ ಶಂಖಪದ್ಮದ್ವಯೋಪಾಶ್ರಿತೆ ಆಶ್ರಿತೇ
ದೇವಿ ದುರ್ಗಾವಟುಕ್ಷೇತ್ರ ಪಾಲೈರ್ಯುತೆ ಮತ್ತ ಮಾತಂಗಕನ್ಯಾ ಸಮೂಹಾನ್ವಿತೇ ...
ಸರ್ವ ಯಂತ್ರಾತ್ಮಿಕೆ ಸರ್ವ ಮಂತ್ರಾತ್ಮಿಕೆ ಸರ್ವ ತಂತ್ರಾತ್ಮಿಕೆ ಸರ್ವ ಮುದ್ರಾತ್ಮಿಕೆ ಸರ್ವ ಶಕ್ತ್ಯಾತ್ಮಿಕೆ ಸರ್ವ ವರ್ಣಾತ್ಮಿಕೆ
ಸರ್ವ ರೂಪೆ ಜಗನ್ಮಾತ್ರುಕೆ ....ಹೇ ಜಗನ್ಮಾತ್ರುಕೆ ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹಿ .........

Baadi hoda balli inda

ಚಿತ್ರ: ಎರಡು ಕನಸು
ಸಾಹಿತ್ಯ: ಚಿ.ಉದಯಶಂಕರ್

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ ||೨||
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತೆಲ್ಲ ಉಲ್ಲಾಸ ಇನ್ನೆಲ್ಲಿದೆ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ
ಹಣತೆಯಲ್ಲಿ ದೀಪ ಉರಿಗೆ ಬೆಳಕಿನಲ್ಲಿ ಬಾಳುವೆ ||೨||
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ ||೨||
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತೆಲ್ಲ ಉಲ್ಲಾಸ ಇನ್ನೆಲ್ಲಿದೆ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ
ನೀರಿನಲ್ಲಿ ದೋಣಿ ಮುಳುಗಿ ಈಜಿ ದಡವ ಸೇರುವೆ ||೨||
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೇ ||೨||
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರು
ನಡೆಸುವಾತ ಬೇರೆ ಅವನ ಇಚ್ಚೆ ಯಾರು ಬಲ್ಲರು ......

Saturday, July 24, 2010

Putta putta hejje ittu....Shobha Shobha

ಚಿತ್ರ: ಪ್ರೇಮದ ಕಾಣಿಕೆ
ಸಾಹಿತ್ಯ: ಚಿ.ಉದಯಶಂಕರ್

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಹಿಂದೆ ಮಾಡಿ ಕಣ್ಣು ಬಿಟ್ಟು
ಓಡೊದೇಕೆ ಕೈಯ್ಯಿ ಕೊಟ್ಟು ನಿಲ್ಲು ಅಲ್ಲೇ ಕೋಪ ಬಿಟ್ಟು ಶೋಭಾ ಶೋಭಾ
ತಾವರೆ ಹೂವು ನೀರಿಗೆ ಚೆಂದ ||೨||
ತೇಲುವ ಮೋಡ ಬಾನಿಗೆ ಚೆಂದ
ಕಂದನ ನಗು ಬಾಳಿಗೆ ಚೆಂದ
ಹರುಷಗೆ ಕುಣಿಯದೆ ನಲಿಯದೆ ನನ್ನ ಚಿನ್ನ ಏನಿದು

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಹಿಂದೆ ಮಾಡಿ ಕಣ್ಣು ಬಿಟ್ಟು
ಓಡೊದೇಕೆ ಕೈಯ್ಯಿ ಕೊಟ್ಟು ನಿಲ್ಲು ಅಲ್ಲೇ ಕೋಪ ಬಿಟ್ಟು ಶೋಭಾ ಶೋಭಾ
ಪ್ರೇಮದಿ ನಿನ್ನ ಅಮ್ಮನೇ ತನ್ನ ||೨||
ಕಂದನ ಕೂಡಿ ಆಡಲು ನನ್ನ
ಅಳುಹಲು ಇಲ್ಲಿ ಬಂದೆನು ಚಿನ್ನ
ಸಿಡುಕದೆ ಸನಿಹಕೆ ಬಂದರೆ ಸಿಹಿ ಮುತ್ತು ನೀಡುವೆ ...

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಹಿಂದೆ ಮಾಡಿ ಕಣ್ಣು ಬಿಟ್ಟು
ಓಡೊದೇಕೆ ಕೈಯ್ಯಿ ಕೊಟ್ಟು ನಿಲ್ಲು ಅಲ್ಲೇ ಕೋಪ ಬಿಟ್ಟು ಶೋಭಾ ಶೋಭಾ

Yaarige yaaruntu

ಸಾಹಿತ್ಯ: ಶ್ರೀ ಪುರಂದರದಾಸರು
ಗಾಯಕರು: ಘಂಟಸಾಲ

ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ||೨||
ಯಾರಿಗೆ ಯಾರೋ

ಬಾಯಾರಿತು ಎಂದು ಭಾವಿ ನೀರಿಗೆ ಹೋದೆ, ಭಾವಿ ಜಲ ಬತ್ತಿ ಬರಿದಾಯಿತೋ ಹರಿಯೇ ||೨||
ಬಿಸಿಲ ತಾಳದೆ ಮರದ ನೆರಳಿಗೆ ಹೋದೆ ||೨||
ಮರ ಬಗ್ಗಿ ಶಿರದ ಮೇಲೆ ವರಗಿತೋ ಹರಿಯೇ
ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ
ಯಾರಿಗೆ ಯಾರೋ

ಅಡವಿಲಿ ಮನೆ ಮಾಡಿ, ಗಿಡಕೆ ತೊಟ್ಟಿಲ ಕಟ್ಟೆ, ತೊಟ್ಟಿಲಿನ ಶಿಶುವೆ ಮಾಯವಾಯಿತೋ ಹರಿಯೇ ||೨||

ತಂದೆ ಶ್ರೀ ಪುರಂದರ ವಿಠಲ ನಾರಾಯಣ ||೨||
ಮರಯದೆ ಎನನ್ನು ನೀನೆ ಸಲಹೋ ಹರಿಯೇ ,
ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ
ಯಾರಿಗೆ ಯಾರೋ

Satyameva Jayathe

"ಪ್ರತಿಯೊಬ್ಬರ ಭವಿಷ್ಯ ಅವರವರ ಕೈಯಲ್ಲೇ ಇರುತ್ತೆ"

ಸರ್ವಜ್ಞಾತ್ಯೇಹಿ ಸರ್ವಜ್ಞದಿತ್ಯೇಹಿ ಸರ್ವಮೇವತೆನೋಹೊಪ್ನೋತಿ ಸರ್ವನ್ಜಯತಿ
ಶ್ರೀರ್ವರ್ಚಸ್ವಮಾಯುಶಮಾರೋಗ್ಯವಾಪಿ ರಾಚೋಭಾಮಾನಂ ಮಹೀಜತೇಹೆ
(ಶ್ರೀರ್ವರ್ಚಸ್ ಸ್ವಮಾಯುಶ್ ಶಮಾರೋಗ್ಯವಾಪಿ ರಾಚೋಭಾಮಾನಂ ಮಹೀಜತೇಹೆ )
ಧಾನ್ಯಂ ಧನಂ ಪಶುಂ ಬಹುಪುತ್ರ ಲಾಭಂ ಶತತಂ ವತ್ಸರಂ ಧೀರ್ಘಮಾಯುಹು ....

ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ || ೨ ||
ಜಯತೆ ಜಯತೆ ಜಯತೆ
ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ || ೨ ||
ಬೆಳಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡುಕ ಬಯಸೆ ಕೆಡುವೆ ಖಚಿತ ...
ಕೆಡುಕ ಬಯಸೆ ಕೆಡುವೆ ಖಚಿತ ಪಡೆವೆ ನೋವು ಖಂಡಿತ
ಸತ್ಯವಾದ ಘನತೆ ಸೋಲೆ ಕಾಣದಂತೆ
ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ
ಜಯತೆ ಜಯತೆ ಜಯತೆ
ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ || ೨ ||
ಅಂತರಂಗದಲ್ಲೇ ಇರುವ ಅಂತರಾತ್ಮ ಕಾಣದೆ
ಆತ್ಮ ಶಕ್ತಿಗಿಂದ ಬೇರೆ ....
ಆತ್ಮ ಶಕ್ತಿಗಿಂದ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ ಸೋಲೆ ಕಾಣದಂತೆ
ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ
ಜಯತೆ ಜಯತೆ ಜಯತೆ