Saturday, August 7, 2010

Madhuvana karedare

ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕರು: ವಾಣಿ
ಚಿತ್ರ: ಇಂತಿ ನಿನ್ನ ಪ್ರೀತಿಯ

ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ ||೨||
ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯಮುರಿದು, ಬಾ ಬಳಿಗೆ ಎಂದಿದೆ
ಶರಣಾಗು ಆದರೆ, ಸೆರೆಯಾಗು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

ಓ... ಕಂಗಳಲಿ ಕನಸಿನ ಕುಲುಮೆ, ಹೊಳೆಯುತಿದೆ ಜೀವದ ಒಲುಮೆ, ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು, ಹೆಸರೆಲ್ಲೋ ಹೋಗಿದೆ ಮರೆತು, ನಾನ್ಯಾರು ಹೇಳು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

ಮನಸಿನ ಹಸಿ ಬಣ್ಣಗಲ್ಲಿ, ನೀನೆಳೆವ ರೇಖೆಗಳಲ್ಲಿ, ನಾ ಮೂಡಬೇಕು ಆದರೆ
ಎದುರಿದ್ದು ಕರೆಯುವೆ ಏಕೆ, ಜೊತೆಯಿದ್ದು ಮರೆಯುವೆ ಏಕೆ, ನಿನ್ನೊಲವು ನಿಜವೆ ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ
ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯಮುರಿದು, ಬಾ ಬಳಿಗೆ ಎಂದಿದೆ
ಶರಣಾಗು ಆದರೆ, ಸೆರೆಯಾಗು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

No comments:

Post a Comment