Thursday, August 5, 2010

Taaye Shaarade Lokapoojite

ಸಾಹಿತ್ಯ: ಸಾಹಿತ್ಯ ರತ್ನ ಚಿ.ಉದಯಶಂಕರ್
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬೆಟ್ಟದ ಹೂವು

ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲುಹು ಮಾತೆ, ನೀಡು ಸನ್ಮತಿ ಸೌಖ್ಯದಾತೆ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ಅಂಧಕಾರವ ಓಡಿಸು,ಜ್ಞಾನಜ್ಯೋತಿಯ ಬೆಳಗಿಸು
ಹೃದಯಮಂದಿರದಲ್ಲಿ ನೆಲೆಸು,ಚಿಂತೆಯ ಅಳಿಸು
ಶಾಂತಿಯ ಉಳಿಸು
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ನಿನ್ನ ಮಡಿಲಿನ ಮಕ್ಕಳಮ್ಮ,ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ,ಬಾಳನು ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ಒಳ್ಳೆ ಮಾತುಗಳಾಡಿಸು,ಒಳ್ಳೆ ಕೆಲಸವಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು,ವಿದ್ಯೆಯ ಕಲಿಸು
ಆಸೆ ಪೂರೈಸು
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲುಹು ಮಾತೆ,ನೀಡು ಸನ್ಮತಿ ಸೌಖ್ಯದಾತೆ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಜ್ಞಾನದಾತೆ ನಮೋಸ್ತುತೆ

No comments:

Post a Comment