Saturday, September 24, 2011

Hindustaanavu endu mareyada...Amrutaghalige

ಸಾಹಿತ್ಯ: ವಿಜಯನರಸಿಂಹ
ಗಾಯನ: ಪಿ.ಜಯಚಂದ್ರನ್
ಚಿತ್ರ: ಅಮೃತಘಳಿಗೆ

ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ ||೨||
ಈ ಕನ್ನಡಮಾತೆಯ ಮಡಿಲಲ್ಲಿ, ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

ದೇಶ ಭಕ್ತಿಯ ಬಿಸಿಬಿಸಿ ನೆತ್ತರು ಧಮನಿಧಮನಿಯಲಿ ತುಂಬಿರಲಿ ||೨||
ವಿಶ್ವಪ್ರೇಮದ ಶಾಂತಿಮಂತ್ರದ ಘೋಶವ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ತತ್ವಸಮನ್ವಯ ತತ್ವಜ್ಯೋತಿಯ ಬೆಳಗಿಸಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ ||೨||
ಕನ್ನಡ ನಾಡಿನ ಎದೆದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲುಕಲ್ಲಿನಲಿ ಕೆತ್ತಿಸಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ
ಈ ಕನ್ನಡಮಾತೆಯತಾಯಿಯಲಿ, ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

Haadu haadu haleyadaadarenu, Maanasa Sarovara

ಸಾಹಿತ್ಯ: ಶಿವರುದ್ರಪ್ಪ
ಗಾಯನ: ವಾಣಿ ಜಯರಾಂ
ಚಿತ್ರ: ಮಾನಸ ಸರೋವರ

ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ ||೨||
ಎದೆಯ ಭಾವ ಹೊಮ್ಮುವುದಕೆ ಭಾಷೆ ಹೊರಟು ಯಾನ ||೨||

ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಹೊರಟು ಯಾನ

ಹಳೆಯ ಹಾಡು ಮತ್ತೆ ಅದೇನೇ ಕೇಳಿ ತಣಿಯುವೆ ||೨||
ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ ||೨||

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ ||೨||
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ ||೨||

ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಹೊರಟು ಯಾನ
ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ

ಕಣಕಣದೆ ಶಾರದೆ ಕಲೆತಿಹಳು ಕಾಣದೆ / Kanakanade Shaarade, Aaptamitra

ಸಾಹಿತ್ಯ: ಶ್ರೀ ಕವಿರಾಜ್
ಗಾಯಕರು: ಶ್ರೀ ಮಧು ಬಾಲಕೃಷ್ಣನ್
ಚಿತ್ರ: ಆಪ್ತಮಿತ್ರ















ಧ್ವನಿಸುರಳಿಯ ಕೊಂಡಿ / Hear the song 

ಕಣಕಣದೆ ಶಾರದೆ ಕಲೆತಿಹಳು ಕಾಣದೆ
ವನವನದಲ್ಲು ಕುಹುಕುಹು ಗಾನ
ಝಾರಿಝಾರಿಯಲ್ಲೂ ಝುಳುಝುಳು ಧ್ಯಾನ
ವಿದವಿದದಾ ನಾದ ಅವಳು ನುಡಿಸುತಿಹಳು
ಕಣಕಣದೆ ಶಾರದೆ ಕಲೆತಿಹಳು ಕಾಣದೆ

ಜನನಕು ಹಾಡು ಮರಣಕು ಹಾಡು ಲಾಲಿ ಚರಮಗಳು
ಪ್ರತಿ ಎದೆಯಾಳ ಧುಳು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ನುಲಿದು ನಲಿದು ಹರಿದು ಬರುವುದು ಶ್ರುತಿ ಲಯವು
ಕಣಕಣದೆ ಶಾರದೆ ಕಲೆತಿಹಳು ಕಾಣದೆ

ಕುಲನೆಲದಾಚೆ ಅರಿಯುವ ಭಾಷೆ, ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರಿಲ್ಲ ಸಪ್ತ ಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗಾ ಮಪಮಪಗಾ
ನಿಪಮಪನಿ ಸನಿಪನಿಸ ಗಸನಿಸಗಾ ಆ ಆ ಆ ಆ

ಕಣಕಣದೆ ಶಾರದೆ ಕಲೆತಿಹಳು ಕಾಣದೆ
ವನವನದಲ್ಲು ಕುಹುಕುಹು ಗಾನ
ಝಾರಿಝಾರಿಯಲ್ಲೂ ಝುಳುಝುಳು ಧ್ಯಾನ
ವಿದವಿದದಾ ನಾದ ಅವಳು ನುಡಿಸುತಿಹಳು
ಕಣಕಣದೆ ಶಾರದೆ ಕಲೆತಿಹಳು ಕಾಣದೆ

Friday, March 25, 2011

Sneha ati madhura

ಸಾಹಿತ್ಯ: ನಾ.ಕೃ.ನಾರಾಯಣ
ಗಾಯಕರು: ರಾಜೇಶ್ ಕೃಷ್ಣನ್

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ||೨||
ಸ್ನೇಹವೇ ಗುಡಿಯು, ಪ್ರೀತಿಯೇ ದೇವರು
ಕಾಲ ದೇಶ ಮೀರಿದ ಭಾವ
ಸ್ನೇಹ ಅತಿ ಮಧುರ

ಸ್ನೇಹಕೆ ವಯಸಿನ ಅಂತರವಿಲ್ಲ, ಸಿರಿತನ ಬಡತನ ಸೀಮೆಗಳಿಲ್ಲ ||೨||
ಸ್ನೇಹಕೆ ಸ್ವಾರ್ಥದ ಆಸೆಗಳಿಲ್ಲ, ಸಮತೆ ಮಮತೆ ಸ್ನೇಹದ ಗಾನ
ಸ್ನೇಹ ಅತಿ ಮಧುರ

ಓಡುವ ನದಿಗೆ ಮೋಡದ ಸ್ನೇಹ, ಅರುಳುವ ಹೂವಿಗೆ ಕಿರಣದ ಸ್ನೇಹ ||೨||
ಬಂಗಾರದ ಶಶಿಗೆ ಸಾಗರದ ಸ್ನೇಹ, ಒಲವು ನಲಿವು ಸ್ನೇಹದ ಚೆಲುವು
ಸ್ನೇಹ ಅತಿ ಮಧುರ

ಲೋಕದ ಜೀವನ ಸ್ನೇಹದ ಬಂಧನ, ಪಾವನ ಪ್ರೇಮ ಸ್ನೇಹದ ಸ್ಪಂದನ ||೨||
ಸ್ನೇಹವ ಬಯಸದ ಜನರೆಲ್ಲಿಹರು, ಹಾಲು ಜೇನು ಸ್ನೇಹದ ಸಂಗಮ

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ||೨||
ಸ್ನೇಹವೇ ಗುಡಿಯು, ಪ್ರೀತಿಯೇ ದೇವರು
ಕಾಲ ದೇಶ ಮೀರಿದ ಭಾವ
ಸ್ನೇಹ ಅತಿ ಮಧುರ