Saturday, December 13, 2014

ಆದದ್ದೆಲ್ಲಾ ಒಳಿತೆ ಆಯಿತು / Aadadella olite aayitu

ಸಾಹಿತ್ಯ    : ಪುರಂದರದಾಸರು 
ಗಾಯಕರು: ಶ್ರೀ ಬಾಲಮುರಳಿಕೃಷ್ಣ 














ಧ್ವನಿಸುರಳಿಯ ಕೊಂಡಿ / Hear the song 

ಆದದ್ದೆಲ್ಲಾ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ।।೨।। 
ಆದದ್ದೆಲ್ಲಾ ಒಳಿತೆ ಆಯಿತು
ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ।।೨।।
ಹೆಂಡತಿ ಸಂತತಿ ಸಾವಿರವಾಗಲಿ ।।೨।।
ದಂಡಿಗೆ ಬೆತ್ತ ಹಿಡಿಸಿದಳಯ್ಯ
ಆದದ್ದೆಲ್ಲಾ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು
ಆದದ್ದೆಲ್ಲಾ ಒಳಿತೆ ಆಯಿತು
ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿ ಎಂದು ಗರ್ವಿಸುತ್ತಿದ್ದೆ ।।೨।।
ಆ ಪತ್ನಿ ಕುಲ ಸಾವಿರವಾಗಲಿ ।।೨।।
ಗೋಪಾಳ ಬುಟ್ಟಿ ಹಿಡಿಸಿದಳಯ್ಯ
ಆದದ್ದೆಲ್ಲಾ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ।।೨।।
ಆದದ್ದೆಲ್ಲಾ ಒಳಿತೆ ಆಯಿತು

Friday, December 12, 2014

ಮಾನವ ಜನ್ಮ ದೊಡ್ಡದು / Maanava janma doddadu

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣರು 
ಗಾಯಕರು : ಶ್ರೀ ರಾಜೀವ ರಮೇಶ್


ಗಾಯಕರು: ಶ್ರೀ ವಿದ್ಯಾಭೂಷಣ : ಧ್ವನಿಸುರಳಿಯ ಕೊಂಡಿ / Hear the song 


ಗಾಯಕರು: ಶ್ರೀ ರಾಜೀವ ರಮೇಶ್  : ಧ್ವನಿಸುರಳಿಯ ಕೊಂಡಿ / Hear the song 



ಮಾನವ ಜನ್ಮ ದೊಡ್ಡದು                                  || ಪ ||    
ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರ          || .ಪ ||    

ಕಣ್ಣು ಕೈಕಾಲ್ಕಿವಿ ನಾಲಿಗೆ ಇರಲಿಕ್ಕೆ 
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಮಾಡುವರೆ                      || ೧ ||

ಕಾಲನ ದೂತರು ಕಾಲ್ಪಿಡಿದೆಳೆವಾಗ 
ತಾಳುತಾಳೆಂದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರದ ಸುಳಿಗೆ ಸಿಕ್ಕಲುಬೇಡಿ           || ೨ ||

ಏನು ಕಾರಣ ಎದುಪತಿಯನು ಮರೆತಿರಿ 
ಧನಧಾನ್ಯ ಪುತ್ರರು ಕಾಯುವರೆ    
ಇನ್ನಾದರು ಏಕ ಭಾವದಿ ಭಜಿಸಿರೊ 
ಚೆನ್ನ ಶ್ರೀ ಪುರಂದರ ವಿಠ್ಠಲರಾಯನ                  || ೩ ||


======================================================

Saahitya  : Sri Purandaradaasaru
Singer      : Sri Vidyabhushanaru
                   : Sri Rajeeva Ramesh


mAnava janma doDDadu                                         || pa ||
ida hAnimADalu beDi huchchappagaLira            || a.pa ||

kaNNu kaikAlkivi nAlige iralikke
maNNu mukki maruLAguvare
heNNu maNNigAgi hariya nAmAmRRita
uNNade upavAsa mADuvare                                    || 1 ||

kAlana dUtaru kAlpiDidLevAga
tALutALeMdare tALuvare
dhALibArada munna dharmava gaLisiro
suLLina saMsArada suLige sikkalubeDi                 || 2 ||

enu kAraNa edupatiyanu martiri
dhanadhAnya putraru kAyuvare
innAdaru eka bhAvadi bhajisiro
chenna shrI purandara viThalarAyana                  || 3 ||

Friday, September 5, 2014

ರಾಮ ರಾಮ ಎನ್ನಿರೋ / Rama rama Enniro

ಸಾಹಿತ್ಯ    : ಪುರಂದರದಾಸರು
ಗಾಯಕರು: ಶ್ರೀ ಶಶಿಧರ ಕೋಟೆ













ಧ್ವನಿಸುರಳಿಯ ಕೊಂಡಿ / Hear the song 

ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ಸೀತಾರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವಾ ನಾಮ ।।೨।।
ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ

ಭರದಿ ಯಮನ ಭಟರು ಬಂದು, ಹೊರಡು ಎಂದು ಮೆಟ್ಟಿ ತುಳಿದು
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದಯ್ಯ
ಇಂದ್ರಿಯಂಗಳೆಲ್ಲ ಕೂಡಿ, ಬಂದು ತನುವ ಮುಸುಕಿದಾಗ
ಸಿಂಧು ಸುತೆಯ ಪತಿಯ ನಾಮ ಅಂದಿಗೊದಗಲರಿದಯ್ಯ
ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ

ಕಲ್ಲು ಮರನಂತೆ, ಜೀವ ನಿಲ್ಲದಂತೆ ಮರಣ ವ್ಯಾಳೆ
ಪುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದಗದಯ್ಯ
ಭ್ರಷ್ಟ ಜನ್ಮದಲ್ಲಿ ಬಂದು ದುಷ್ಟ ಕರ್ಮಗಳನೆ ಮಾಡಿ
ಬಿಟ್ಟು ಹೋಗುವ ಸಮಯ ಪುಂದರವಿಠ್ಠಲ ನಾಮ ಒದಗದಯ್ಯ

ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ಸೀತಾರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವಾ ನಾಮ
ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಶ್ರೀರಾಮ ಎನ್ನಿರೋ ಶ್ರೀರಾಮ ಎನ್ನಿರೋ ರಾಮ ಎನ್ನಿರೋ

Wednesday, September 3, 2014

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು / Amma Ninna Edeyaaladalli Gaalakke Sikka Meenu

ಸಾಹಿತ್ಯ     : ಬಿ.ಆರ್.ಲಕ್ಷ್ಮಣ್ ರಾವ್
ಗಾಯಕರು: ಬಿ.ಆರ್.ಛಾಯ











ಧ್ವನಿಸುರಳಿಯ ಕೊಂಡಿ / Hear the song


ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು ।।೨।।
ಕಡಿಯಲೊಲ್ಲೆ ನೀ ಕರುಳಬಳ್ಳಿ ಒಲವೂಡುತಿರುವ ತಾಯೇ , ಬಿಡದ ಭುವಿಯಾ ಮಾಯೆ
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ, ಅಡಗಲಿ ಎಷ್ಟು ದಿನ, ದೂಡು ಹೊರಗೆ ನನ್ನ ।।೨।।
ಓಟ ಕಲಿವೆ, ಒಳ ನೋಟ ಕಲಿವೆ ।।೨।।
ನಾ ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ ।।೨।।
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು

ಮೇಲೆ ಹಾರಿ ನಿನ್ನ ಸೇಳತ ಮೀರಿ, ನಿರ್ಭಾರ ಸ್ಥಿತಿಗೆ ತಲುಪಿ ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು ಬಂದೆ ಬರುವೆನು ।।೨।।
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ ।।೨।।
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು

--------

ಶಬ್ಧಾರ್ಥಗಳು: 

ಒಲವೂಡು = ಒಲವನ್ನು ಉಣಿಸುವ
ಊರ್ಧ್ವ = ಭೂಮಿ
ಬೆದಕಿ = ಇರಿ
ಮೂರ್ತ = ವಾಸ್ತವ


ಗಜಮುಖ ವಂದಿಸುವೆ / Gajamukha Vandisuve

ಸಾಹಿತ್ಯ     : ಶ್ರೀ ವಾದಿರಾಜ ತೀರ್ಥರು
ಗಾಯಕರು : ಶ್ರೀ ಶಶಿಧರ ಕೋಟೆ


ಧ್ವನಿಸುರಳಿಯ ಕೊಂಡಿ / Hear the song 

ಗಜಾನನಂ ಭೂತ ಗಣಾದಿ ಸೇವಿತಂ ।।೨।।
ಕಪಿತ್ತ ಜಂಬೂ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಣಂ ।।೨।।
ನಮಾಮಿ ನಮಾಮಿ ವಿಘ್ನೇಶ್ವರ ಪಾದ ಪಂಕಜಂ

ಗಜಮುಖ ವಂದಿಸುವೆ ।।೨।।
ಕರುಣಾನಿಧಿ ಕಾಯೋ ದೇವ, ಗಜಮುಖ ವಂದಿಸುವೆ ।।೨।।
ಗಜಮುಖ ವಂದಿಪೆ, ಗಜಗೌರಿಯ ಪುತ್ರ ಆಅ ಆಅಆಆ ಆಅಆಆ
ಗಜಮುಖ ವಂದಿಪೆ, ಗಜಗೌರಿಯ ಪುತ್ರ ।।೨।।
ಅಜನ ಪಿತನ ಮೊಮ್ಮಗನ ಮೋಹದ ಬಾಲ
ಗಜಮುಖ ವಂದಿಪೆ, ಗಜಗೌರಿಯ ಪುತ್ರ
ಅಜನ ಪಿತನ ಮೊಮ್ಮಗನ ಮೋಹದ ಬಾಲ
ಗಜಮುಖ ವಂದಿಸುವೆ

ನೀಲಕಂಠಸುತ ಬಾಲಗಣೇಶನೇ ಬಾರಿಬಾರಿಗೆ ನಿನ್ನ ಭಜನೆ ಮಾಡುವೇನಯ್ಯ ।।೨।।
ಪರ್ವತನ ಪುತ್ರಿ, ಪಾರ್ವತಿಕುಮಾರ ।।೨।।
ಗರುವಿಯ ಚಂದ್ರಗೆ ಸ್ಥಿರಶಾಪ ಕೊಟ್ಟನೆ ।।೨।।
ಗಜಮುಖ ವಂದಿಸುವೆ

ಹರಿಹರರು ನಿನ್ನ ಚರಣ ಪೂಜೆಯ ಮಾಡಿ, ದುರುಳ ಕಂಟಕರನು ತರಿದು ಬಿಸುಡಿದರಯ್ಯ  ।।೨।।
ವಾರಿಜನಾಭ ಶ್ರೀ ಹಯವದನನ ಪಾದ ಸೇರುವ ಮಾರ್ಗದ ದಾರಿಯ ತೋರೋ ।।೨।।
ಗಜಮುಖ ವಂದಿಸುವೆ
ಕರುಣಾನಿಧಿ ಕಾಯೋ ದೇವ, ಗಜಮುಖ ವಂದಿಸುವೆ
ಗಜಮುಖ ವಂದಿಸುವೆ ।।೨।।

Friday, August 8, 2014

ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ / Amma Neenu namagaagi, saavira varusha sukhavaagi


ಸಾಹಿತ್ಯ : ಚಿ.ಉದಯಶಂಕರ್
ಗಾಯಕರು: ಡಾ. ರಾಜ್ ಕುಮಾರ್, ಪಿ.ಬಿ.ಶ್ರೀನಿವಾಸ್
ಚಲನಚಿತ್ರ: ಕೆರಳಿದ ಸಿಂಹ















ಧ್ವನಿಸುರಳಿಯ ಕೊಂಡಿ / Hear the song 

ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೇಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೇಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೇಬೇಕು ಈ ಮನೆ ಬೆಳಕಾಗಿ

ಬಾಡದ ತಾವರೆ ಹೂವಿನ ಹಾಗೆ, ಎಂದಿಗೂ ಆರದ ಜ್ಯೋತಿಯ ಹಾಗೆ
ಗೋಪುರವೇರಿದ ಕಲಶದ ಹಾಗೆ, ಆ ಧ್ರುವತಾರೆಯೇ ನಾಚುವ ಹಾಗೆ
ಜೊತೆಯಲಿ ಎಂದೆಂದೂ ನೀನಿರಬೇಕು, ಬೇರೆ ಏನೂ ಬೇಡೆವು ಸಾಕು

ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ಸಂಜೆಯ ಗಾಳಿಯ ತಂಪಿನ ಹಾಗೆ, ಮಲ್ಲಿಗೆ ಹೂವಿನ ಕಂಪಿನ ಹಾಗೆ
ಜೀವವ ತುಂಬವ ಉಸಿರಿನ ಹಾಗೆ, ನಮ್ಮನು ಸೇರಿ ಎಂದಿಗೂ ಹೀಗೆ
ನಗುತಲಿ ಒಂದಾಗಿ ನೀನಿರಬೇಕು, ನಿನ್ನ ನೆರಳಲಿ ನಾವಿರಬೇಕು

ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ಸಾವಿರ ನದಿಗಳು ಸೇರಿದರೇನು, ಸಾಗರಕೆ ಸಮನಾಗುವುದೇನು
ಶತಕೋಟಿ ದೇವರು ಹರಸಿದರೇನು, ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆನಂದ ತಂದರೆ ಸಾಕು, ಬೇರೆ ಪೂಜೆ ಏತಕೆ ಬೇಕು

ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೇಬೇಕು ಈ ಮನೆ ಬೆಳಕಾಗಿ ।

ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ

ಲಾಲಿ ಲಾಲಿ ಅಮ್ಮ ... ತೂಗದ ಜೋಕಾಲಿ ಅಮ್ಮ /Laali Laali Amma..Toogada jokaali amma

ಸಾಹಿತ್ಯ    : ಕೆ.ಕಲ್ಯಾಣ್
ಗಾಯಕರು : ನರೇಶ್ ಅಯ್ಯರ್
ಚಲನಚಿತ್ರ : ಗಾಡ್ ಫಾದರ್










ಧ್ವನಿಸುರಳಿಯ ಕೊಂಡಿ / Hear the song 

ಲಾಲಿ ಲಾಲಿ ಅಮ್ಮ ... ತೂಗದ ಜೋಕಾಲಿ ಅಮ್ಮ ... ಖಾಲಿ ಖಾಲಿ ಅಮ್ಮ .. ಮಲಗಿಸದ ಸುವ್ವ ಲಾಲಿ ಅಮ್ಮ ।।೨।।
ಧಗಧಗಿಸೊ ಮಡಿಲಲ್ಲಿ, ಬೆಂದು ಬೆಳೆದೆನಮ್ಮ...  ರಣಕಹಳೆಯ ನಡುವೆ ರಾತ್ರಿ ಕಳೆದೆನಮ್ಮ
ನಿನದು ಅತ್ತಕಣ್ಣೀರು, ನನದು ರಕ್ತಕಣ್ಣೀರು, ಇಲ್ಲಿ ಯಾರು ಯಾರೋರು

ಹೇ ಹೇ ಹೇ

ಅತ್ತು ಅತ್ತು ಅನುರಾಗದಲಿ ಹೆತ್ತ ತಾಯಿ ನೀನಾದೆ, ಸತ್ತು ಸತ್ತು ರಣರಂಗದಲಿ ಹೊತ್ತ ತಾಯಿ ನಾನಾದೆ
ಲಾಲಿ ಲಾಲಿ ಅಮ್ಮ ... ತೂಗದ ಜೋಕಾಲಿ ಅಮ್ಮ ... ಖಾಲಿ ಖಾಲಿ ಅಮ್ಮ .. ಮಲಗಿಸದ ಸುವ್ವ ಲಾಲಿ ಅಮ್ಮ
ಅ ಎಂದರೆ ಅಳಿಯಲಾರೆ ಅಮ್ಮ .... ಮ ಎಂದರೆ ಮರೆಯಲಾರೆ ಅಮ್ಮ
ಅ ಎಂದರೆ ಅಳಿಯಲಾರೆ ಅಮ್ಮ ...ಅಮ್ಮ . ಮ ಎಂದರೆ ಮರೆಯಲಾರೆ ಅಮ್ಮ
ಮುತ್ತೆ ಆದರೇನು ತುತ್ತೆ ಆದರೇನು ಗೊತ್ತೇ ಇಲ್ಲ ಎಂದಿಗೂ ಅಮ್ಮ ನನ್ನಮ್ಮ
ಅರೆಚಾಟ ಕಿರುಚಾಟವೆ, ಪರದಾಟ ಸೆಳೆಸಾಟವೆ, ಕಾದಾಟ ಕದಲಾಟವೆ, ಬಾಲ್ಯದ ಗೆಳೆಯರಾದವೆಮ್ಮ

ಹೇ ಹೇ ಹೇ

ದ್ವೇಷ ಸಮರವೆ ಆಟಗಳು, ಭ್ರಾಂತಿ ಭೀತಿಯೇ ಪಾಠಗಳು, ಕವಿದಿವೆ ಕತ್ತಲೆ ಕೂಟಗಳು, ನಿಲ್ಲದು ಕಾಲದ ಓಟಗಳು
ನಾನು ಒಬ್ಬ ಹುಚ್ಚ, ಅಮ್ಮನ ಹುಚ್ಚು ಹಿಡಿದ ಹುಚ್ಹ, ಅಮ್ಮನೆದುರು ಯಾರೇ ಇರಲಿ ಅವಳಿಗಿಂತ ಹೆಚ್ಚಾ ।।೨।।

ಮೋಸದ ಜಗವಮ್ಮ, ಬೆಂಕೀಲು ಸುಡದಮ್ಮ, ನೀ ನನ ಮಗುವಮ್ಮ, ನೀ ನೊಯೆಲು ಬಿಡೆನಮ್ಮ
ಅಂಬಲಿ ಕಂಡಿಲ್ಲ, ಆಕ್ರೋಶವ ಹುಡಿದೆನ್ಮ, ಆ ವೇಷವೆ ನನ ಜನ್ಮ ಆಅ ಆಅ

ಹೇ ಹೇ ಹೇ

ಗಾಡೆ ಕಾರಣವಾಗಿರಲಿ, ಗಾಡ್ಫಾದರೆ ಕಾರಣವಾಗಿರಲಿ, ನಿನ್ನೀ ಗತಿಗೆ ತಂದವನ ಮನ್ನಿಸಲಾರೆ ಬದುಕಿನಲಿ
ಲಾಲಿ ಲಾಲಿ ಅಮ್ಮ ... ತೂಗದ ಜೋಕಾಲಿ ಅಮ್ಮ ... ಖಾಲಿ ಖಾಲಿ ಅಮ್ಮ .. ಮಲಗಿಸದ ಸುವ್ವ ಲಾಲಿ ಅಮ್ಮ ।।೨।।
ಮಲಗಿಸದ ಸುವ್ವ ಲಾಲಿ ಅಮ್ಮ ।।೩।।



Friday, July 25, 2014

ದೇಹವೆಂದರೆ ಓ ಮನುಜ / Dehavendare O Manuja

ಸಾಹಿತ್ಯ    : ವಿ. ಮನೋಹರ್
ಗಾಯಕರು: ಡಾ. ರಾಜ್ ಕುಮಾರ್ 
ಚಲನಚಿತ್ರ : ಜನುಮದ ಜೋಡಿ















ಹೇಯ್....  ಓ ....
ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ ನಿಜ 
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ
ನಶ್ವರ ಕಾಯ ನಂಬದಿರಯ್ಯ, ಈಶ್ವರನೇ ಗತಿ ಮರೆಯದಿರಯ್ಯ,
ತ್ಯಾಗದಿ ಪಡೆಯೊ ಸುಖವು ಶಾಶ್ವತ

ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ ನಿಜ
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ

ಕಟ್ಟಿರುವ ಗುಡಿಯಲ್ಲಿ, ಉಟ್ಟಿರುವ ಮಡಿಯಲ್ಲಿ, ಸುಟ್ಟ ಧೂಪ ದೀಪದಿ ಶಿವನಿಲ್ಲ
ಬಗೆಬಗೆ ಮಂತ್ರದಲ್ಲಿ, ಯಾಗಯಜ್ಞಗಳಲ್ಲಿ, ಜಪತಪವ್ರತದಲ್ಲಿ ಅವನಿಲ್ಲ
ಮಣ್ಣ ಕಣಕಣದಲ್ಲು, ಜೀವಜೀವಗಳಲ್ಲು,
ಒಳಗಿನ ಕಣ್ಣಿಗೆ ಕಾಣುವಾತನು

ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ ನಿಜ
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ

ಮೇಲುಕೀಳಿನ ನಡತೆ, ಹಾದಿ ತಪ್ಪಿದ ಜಡತೆ, ಕುಲವ್ಯಾಕುಲಗಳು ಸರಿಯೇನು
ರೋಷದ್ವೇಷದ ಉರಿಯು, ಲೋಭ ಮೋಸದ ಪರಿಯು, ಸಾಗುವ ದಾರಿಗೆ ಬೆಳಕೇನು
ಅನ್ಯರ ಗುಣದಿ ಸನ್ಮತಿ ಹುಡುಕು,
ಸತ್ಯದ ಪಥವೇ ಬೆಳ್ಳಿ ಬೆಳಕು

ಕರುಣೆ ಪ್ರೇಮವೇ ಉಲ್ಲಾಸ, ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ, ನೀತಿ ಮಾರ್ಗವೇ ಭವನಾಶ
ವೈಭೋಗ ಜೀವನ ತ್ಯಾಗವ ಮಾಡಿ, ವೈರಾಗ್ಯ ಯೋಗದ ಸಾಧನೆ ಮಾಡಿ
ಕೈವಲ್ಯ ಹೊಂದುವ ಪರಮ ಸಂಪದ

ಕರುಣೆ ಪ್ರೇಮವೇ ಉಲ್ಲಾಸ, ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ, ನೀತಿ ಮಾರ್ಗವೇ  ಭವನಾಶ

ಆ ಆ ಆ ಆ

ದೇವರೇ ಅಗಾಧ ನಿನ್ನ ಮಹಿಮೆಯ ಕಡಲು / Devare Agaadha Ninna mahimeya kadalu

ಸಾಹಿತ್ಯ      : ಶ್ರೀ ಬಿ.ಆರ್. ಲಕ್ಷ್ಮಣ್ ರಾವ್
ಗಾಯಕರು  : ಶ್ರೀ ರಾಜೇಶ್ ಕೃಷ್ಣನ್
ಚಲನಚಿತ್ರ   : ಡೈರೆಕ್ಟರ್ಸ್ ಸ್ಪೆಷಲ್



ಧ್ವನಿಸುರಳಿಯ ಕೊಂಡಿ / Hear the song 



ದೇವರೇ .... 
ಅಗಾಧ ನಿನ್ನ ಮಹಿಮೆಯ ಕಡಲು 
ಹೇಗೆ ಸಾಧ್ಯವೋ ಅದರ ಆಳವಳೆಯಲು ...
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು
ತೋಳಕೆಂದು ಕುರಿಯ ಕೊಟ್ಟೆ 
ಸಿಂಹಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೇ ಬಿಟ್ಟೆ ಬೇಟೆಯಾಡಲು
ಅಗಾಧ ಅಗಾಧ ಅಗಾಧ ನಿನ್ನ ಮಹಿಮೆಯ ಕಡಲು

ತುಳಿತಕೆ ನೀ ತಿಮಿರು ಕೊಟ್ಟೆ 
ದುಡಿತಕೆ ಬರಿ ಬೆವರು ಕೊಟ್ಟೆ
ಕವಿಗೆ ನುಡಿಯ ಢಮರು ಕೊಟ್ಟೆ ಬಡಿದು ದಣಿಯಲು
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು

ನರನಿಗೆಂದೆ ನಗೆಯ ಕೊಟ್ಟೆ 
ನಗೆಯೊಳು ಹಲ ಬಗೆಯನಿಟ್ಟೆ
ನೂರು ನೋವ ಬಿಟ್ಟೆ, ಒಂದು ನಗೆಯ ಕಾಣಲು
ಎರಲೊಂದು ಏಣಿ ಕೊಟ್ಟೆ, ಕಚ್ಚಲೆಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು

ಆಅ ಆಅ
ಕೈಯ ಕೊಟ್ಟೆ ಕೆಡವಲೆಂದು
ಕಾಲು ಕೊಟ್ಟೆ ಎಡವಲೆಂದು
ಬುದ್ಧಿ ಕೊಟ್ಟೆ ನಿನ್ನನ್ನೇ ಅಲ್ಲಗಳಿಯಲು
ವಿಶೇಷ, ವಿಶೇಷ, ವಿಶೇಷ, ನಿನ್ನ ಮಹಿಮೆಯ ಕಡಲು
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು
ಹೇಗೆ ಸಾಧ್ಯವೋ ಅದರ ಆಳವಳೆಯಲು ...
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು

Tuesday, June 24, 2014

ಎಷ್ಟೊಂದು ರೂಪಗಳು ಕಣ್ಣೆದುರಿನಲ್ಲಿ .. ಎಷ್ಟೊಂದು ಭಾವಗಳು ಮನದ ಆಳದಲ್ಲಿ / Yeshtondu Roopagalu kannedurinalli



ಸಾಹಿತ್ಯ    : ಸುಬ್ರಾಯ ಚೊಕ್ಕಾಡಿ
ಗಾಯಕರು : ಸಿ.ಅಶ್ವಥ್


ಧ್ವನಿಸುರಳಿಯ ಕೊಂಡಿ / Hear the song 

ಎಷ್ಟೊಂದು ರೂಪಗಳು ಕಣ್ಣೆದುರಿನಲ್ಲಿ ..  ಎಷ್ಟೊಂದು ಭಾವಗಳು ಮನದ ಆಳದಲ್ಲಿ ।।೨।।

ಕಣ್ಣೆದುರ ಕುಣಿತದಲಿ..  ಇರದೇನೆ ಜೀವ, ಆಳದಲಿ ಬೇಯುತಿದೆ  ಮೈ ಇರದ ಭಾವ ।।೨।।
ಆಗೊಮ್ಮೆ ಈಗೊಮ್ಮೆ ನೆನಪಿನಲಿ ಮೂಡಿ ।।೨।।
ಮರೆಯಾಗಿ ಹೋಗು .. ಇರದೇ ಜೊತೆಗೂಡಿ
ಎಷ್ಟೊಂದು ರೂಪಗಳು ಕಣ್ಣೆದುರಿನಲ್ಲಿ ..  ಎಷ್ಟೊಂದು ಭಾವಗಳು ಮನದ ಆಳದಲ್ಲಿ

ಕಣ್ಣ ಭಾವಗಳು ಏನೋ...  ಒಳಗೆಂಥ ರೂಪ ... ಸಮಸರವೇ ಇರದಂಥ ಬಾಳೊಂದು ಶಾಪ ।।೨।।
ರೂಪಕ್ಕೊಕ್ಕುವ ಭಾವ ... ಭಾವಕ್ಕೆ ರೂಪ ।।೨।।
ಒಳಗೂ ಹೊರಗೂ ನಡುವೆ ಇರಲಿ ಸಲ್ಲಾಪ ।।೨।।

ಎಷ್ಟೊಂದು ರೂಪಗಳು ಕಣ್ಣೆದುರಿನಲ್ಲಿ ..  ಎಷ್ಟೊಂದು ಭಾವಗಳು ಮನದ ಆಳದಲ್ಲಿ ।।೨।।

ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು/Entha Dinagalavu Mareyaagi hodavu


ಸಾಹಿತ್ಯ    : ಸುಬ್ರಾಯ ಚೊಕ್ಕಾಡಿ
ಗಾಯಕರು : ಸಿ.ಅಶ್ವಥ್



ಧ್ವನಿಸುರಳಿಯ ಕೊಂಡಿ / Hear the song 

ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು ।।೨।।
ಎಂಥಾ ದಿನಗಳವು
ಸುರಿವ ಮಳೆಗೆ ದೋಣಿಯನ್ನು ತೇಲಿ ಬಿಟ್ಟೆವು, ಚಿಟ್ಟೆ ಹೂವ ಗೊಂದಲದಲಿ ನಕ್ಕು ನಲಿದೆವು ।।೨।।
ಮುಗಿಲ ಬಣ್ಣ ಚಂದ್ರ ತಾರೆ ಹಾಡ ಹಿಡಿದೆವು, ಮುಂದೆನುಗ್ಗಲೇನೋ ಬಡಿದು ಕೆಳಕೆ ಕುಸಿದೆವು
ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು
ಹಕ್ಕಿಬೆನ್ನನೇರಿ ಗಗನ ಮೀರಿ ನೆಗೆದೆವು, ಇಂದ್ರಛಾಪದಲ್ಲಿ ಕೈ ಕೈ ಬೆಸೆದು ನಡೆದೆವು ।।೨।।
ಈಗ ಹಕ್ಕಿ ರೆಕ್ಕೆ ಮುರಿದು ಧರೆಗೆ ಉರಿಳಿದೆ, ।।೨।।
ಕಿಸೆಯಲಿಟ್ಟ ಬಿಲ್ಲ ತುಣುಕು ಕಳೆದೆ ಹೋಗಿದೆ
ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು

Wednesday, April 2, 2014

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ ..Ooru hegendu oora janaru hegendu arite nanna annayya

ಸಾಹಿತ್ಯ: ಚಿ.ಉದಯಶಂಕರ 
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಚಿತ್ರ: ಕರುಣಾಮಯಿ

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ 
ಆಹಾ ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಇಂತಃ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ್ಯ ।। ೨ ।।
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ , ತಿಳಿದೇ ನನ್ನ ಅಕ್ಕಯ್ಯ ....

ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಎಂದೋ ಹೋಯಿತೋ ।।೨।।
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ ಕೊಲ್ಲುವ ಕಾಲ ಬಂದಿತು ।।೨।।
ಇಂತಃ ಕಲಿಗಾಲದಾಗ ಆಹಾ ಆಹಾ ಇಂತಃ ಜನ ಬಾಳುವಾಗ ಓಹೋಹೊ
ಇಂತಃ ಕಲಿಗಾಲದಾಗ ಇಂತಃ ಜನ ಬಾಳುವಾಗ ಮಳೆ ಹೇಗೆ ಭೂಮಿಗೆ ಬಂದೀತು, ಋತುವೆಲ್ಲ ಹಿಂದೆಮುಂದೆ ಆಯಿತು

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಈ ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಇಂತಹ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ್ಯ ।। ೨ ।।
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ , ತಿಳಿದೇ ನನ್ನ ಅಕ್ಕಯ್ಯ ....

ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡೀರೆ ಅವರ ದೇವರು
ಹಹಹ ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡೀರೆ ಅವರ ದೇವರು
ಸಾಕೀದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು ।।೨।।
ಹತ್ತು ಅವತಾರವೇನು, ನೂರು ಅವತಾರವೇನು
ಹತ್ತು ಅವತಾರವೇನು, ನೂರು ಅವತಾರವೇನು ಸಂಸಾರ ಉದ್ಧಾರವಾದೀತೇ ಈ ಸ್ವಾರ್ಥ ಗುಣ ನಾಶವಾದೀತೇ

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ನಮ್ಮ ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಇಂತಃ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ್ಯ ।। ೨ ।।
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ , ತಿಳಿದೇ ನನ್ನ ಅಕ್ಕಯ್ಯ ....