Saturday, January 24, 2015

ಬಾ ಇಲ್ಲಿ ಸಂಭವಿಸು / Baa Illi Sambhavisu

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ 
ಓ ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿಹೆ ಭವಿದೂರ
ಓ ನಿತ್ಯವು ಅವತರಿಪ ಸತ್ಯಾವತಾರ
ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನೆಡೆಗೆ ಕಣ್ಣಾದ ಗುರುವೇ ಭಾರ
ಮೂಡಿ ಬಂದೆನ್ನ ನರರೂಪ ಚೇತನದಿ
ಮೂಡಿ ಬಂದೆನ್ನ ನರರೂಪ ಚೇತನದಿ
ನಾರಯಣತ್ವಕ್ಕೆ ದಾರಿ ತೋರ
ಓ ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಅಂದು ಅರೆಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಿಲಲಿ
ಅಂದು ಅರೆಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಿಲಲಿ
ದೇಶದೇಶದಿ ವೇಷ ವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ ಸುತ್ತಿಲೋಲ
ಚೋದಿಸಿರುವೆಯೊ ಅಂತೆ ಸುತ್ತಿಲೋಲ
ಅವತರಿಸು ಬಾ ಹೇ ಅವತರಿಸು ಬಾ
ಓ ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದಶೀಲ ।।೫।।

No comments:

Post a Comment