Monday, January 7, 2013

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ/Baagilolu kai mugidu baa yaatrikane

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಸಾಹಿತ್ಯ: ರಾಷ್ಟ್ರಕವಿ ಕುವೆಂಪು  
ಗಾಯಕರು: ರಮ್ಯ ವಸಿಷ್ಠ, ಪಲ್ಲವಿ.ಎಂ.ಡಿ, ಹೇಮಂತ್, ಜಿ.ಜೆ.ಭರತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು ||2||
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು, ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ  
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು

ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ ||2||
ಕರ್ಪೂರದಾರತಿಯ ಜ್ಯೋತಿ ಇಲ್ಲ
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿ ಇಲ್ಲ
ಭಗವಂತನಾನಂದ .....
ಭಗವಂತನಾನಂದ ರೂಪುಗೊಂಡಿಹುದಿಲ್ಲಿ ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು

{ ತತ್ತಿತ್ ತಕಣಕ ಝಂ, ತರಿಕಿಟತಕ ಝಂ, ತ ಝಂ
ತತ್, ತರಿಕಿಟ ತ, ದಣಕಿಟ ತ, ಝಣುಕಿಟ ತ, ಧಿಮಿಕಿಟತಕಧಿಂ ತಕಣಕ ಝಂ, ತರಿಕಿಟತಕ ಝಂ, ತ ಝಂ
ತತ್, ತರಿಕಿಟ ತ, ದಣಕಿಟ ತ, ಝಣುಕಿಟ ತ, ಧಿಮಿಕಿಟತಕಧಿಂ ತಕಣಕ ಝಂ, ತರಿಕಿಟತಕ ಝಂ, ತ ಝಂ
ತಕತತ್ತಿತ್ ತಕಣಕ ಝಂ, ತರಿಕಿಟತಕ ಝಂ, ತ ಝಂ, ತತ್ತಿತ್ ತಕಣಕ ಝಂ, ತರಿಕಿಟತಕ ತಕತ್ತಿತ್ ತಕಣಕ ಝಂ
ತರಿಕಿಟತಕ ತಧಿಂಕಿಣತು ತ, ತಕ ತಧಿಂಕಿಣತು ತಕ ತಧಿಂಕಿಣತು ತ, ತ ತಝಂ ತರಕಿಟತಂ, ತ ತಝಂ ತರಕಿಟತಂ, ತ ತಝಂ ತರಕಿಟತಂ }

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ ......ಬಾದರಾಯಣನಂತೆ  ಭಾರತವ ಹಾಡುತಿಹುದಿಲ್ಲಿ 
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ, ಬಾದರಾಯಣನಂತೆ  ಭಾರತವ ಹಾಡುತಿಹುದಿಲ್ಲಿ 
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ ||2||
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ