Friday, October 20, 2017

ನೀಡು ಶಿವ ನೀಡದಿರೂ ಶಿವ/ Needu Shiva Needadiroo Shiva

ಸಾಹಿತ್ಯ     : ಶ್ರೀ ಹಂಸಲೇಖ 
ಗಾಯಕರು : ಕೆ.ಎಸ್. ಚಿತ್ರ 
ಚಲನಚಿತ್ರ : ಗಾನಯೋಗಿ ಪಂಚಾಕ್ಷರ ಗವಾಯಿ 



ಧ್ವನಿಸುರಳಿಯ ಕೊಂಡಿ / Hear the song 


ನೀಡು ಶಿವ ನೀಡದಿರೂ ಶಿವ
ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ಶೃಂಗಾರ ಕೃತಕ  ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರ ಏಕೆ
ಶೃಂಗಾರ ಕೃತಕ  ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರ ಏಕೆ

ನೀನಿತ್ತ ಕಾಯ ......
ನೀನಿತ್ತ ಕಾಯ, ನಿನ್ನ ಕೈಯೆ ಮಾಯ
ಆಗೋದು ಹೋಗೋದು ನಾ ಕಾಣೆನೆ

ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ

ಮಾಳಿಗೆ ಕೊಟ್ಟರು, ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಮಾಳಿಗೆ ಕೊಟ್ಟರು, ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ.........
ಆ ಆ ಆ
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ಒಲಿಸೋದು ನಾ ಕಾಣೆನೆ

ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರೂ ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ

ಓಂ ಬ್ರಹ್ಮಾನಂದ ಓಂಕಾರ/ Om Brahmaananda Omkara

"ಓಂ ಬ್ರಹ್ಮಾನಂದ ಓಂಕಾರ "

ಸಾಹಿತ್ಯ    : ಶ್ರೀ ಹಂಸಲೇಖ  

ಗಾಯಕರು: ಡಾ. ರಾಜ್ ಕುಮಾರ್
ಚಲನಚಿತ್ರ : ಓಂ

ಧ್ವನಿಸುರಳಿಯ ಕೊಂಡಿ / Hear the song 



ಓಂ ಓಂ
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದ ಓಂ

ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ

ನಗುವ ಮನಸೇ ಸಾಕು ನಮಗೆ ಹಗಲುಗನಸೆ ಬೇಡ
ಮನೆಯ ತುಂಬಾ ಪ್ರೀತಿ ಸಾಕು, ಬೆಳ್ಳಿ ಚಿನ್ನ ಬೇಡ
ತಂದೆತಾಯೆ ದೈವ, ಗುರುವೇ ನಮ್ಮ ಜೀವ
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು.....
ಆ ಆ ಆ ಆಆ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ

ಸತ್ಯ ಹೇಳೋ ಕನ್ನಡಿ ಅಂತೆ, ಅಂತರಂಗ ಮಾಡು
ದಯೆ ತೋರೊ ಧರಣಿ ಅಂತ, ಮನೋಧರ್ಮ ನೀಡು
ನೊಂದ ಎಲ್ಲ ಜೀವ, ನನ್ನದೆಂಬ ಭಾವ
ಬಾಳಿನಲ್ಲಿ ತುಂಬೋ ವಿದ್ಯವಿನಯ ಕರುಣಿಸೋ...
ಆ ಆ ಆ ಆಆ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದ ಓಂ

ಓಂ ಬ್ರಹ್ಮಾನಂದ ಓಂಕಾರ
{ಆ ಆ ಆ ಆಆ }
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ {ಆ ಆ ಆ ಆಆ }
ಆಧ್ಯಾತ್ಮಾಭಿ ಮಧುಸಾರ  {ಆ ಆ ಆ ಆಆ }

Friday, September 22, 2017

ಸೋರುತಿಹುದು ಮನೆಯ ಮಾಳಿಗಿ / Sorutihudu Maneya Maaligi

"ಸೋರುತಿಹುದು ಮನೆಯ ಮಾಳಿಗಿ"

ಸಾಹಿತ್ಯ    : ಸಂತ ಶಿಶುನಾಳ ಶರೀಫ  

ಗಾಯಕರು: ಶ್ರೀ ಸಿ.ಅಶ್ವಥ್



ಧ್ವನಿಸುರಳಿಯ ಕೊಂಡಿ / Hear the song 



ಸೋರುತಿಹುದು ಮನೆಯ ಮಾಳಿಗಿ  
ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದ 
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ 

ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲ 
ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲ 
ಕಾಳಕತ್ತಲೆ ಒಳಗೆ ನಾನು, ಮೇಲಕ್ಕೇರಿ ಹೋಗಲಾರೆ 
ಸೋರುತಿಹುದು ಸೋರುತಿಹುದು ಸೋರುತಿಹುದು ಮನೆಯ ಮಾಳಿಗಿ

ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಮುರುಕು ತೊಲೆಯು, ಹುಳುಕು ಜಂತಿ, ಕೊರೆದು ಸರಿದು, ಕೀಲ ಸಡಲಿ
ಮುರುಕು ತೊಲೆಯು, ಹುಳುಕು ಜಂತಿ, ಕೊರೆದು ಸರಿದು, ಕೀಲ ಸಡಲಿ 
ಹರಕು ಚಪ್ಪರ ಜೇರು ಗಿಂಡಿ ಮೇಲಕ್ಕೇರಿ ಮೆಟ್ಟಲಾರೆ 
ಸೋರುತಿಹುದು ಸೋರುತಿಹುದು ಸೋರುತಿಹುದು ಮನೆಯ ಮಾಳಿಗಿ

ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಓ ಕಾಂತೆ ಕೇಳೆ ತರುಣದಿಂದ, ಬಂತು ಕಾಣೆ ಹುಬ್ಬಿ ಮಳೆಯು 
ಎಂತೋ ಶಿಶುನಾಳದೀಶ ತಾನು 
ಎಂತೋ ಶಿಶುನಾಳದೀಶ ತಾನು 
ನಿಂತು ಪೊರೆವನು ಎಂದು ನಂಬಿದೆ 

ಸೋರುತಿಹುದು ಮನೆಯ ಮಾಳಿಗಿ  
ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದ 
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ 

ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

Monday, August 7, 2017

ಒಬ್ಬನೇ, ಒಬ್ಬನೇ .... ಮಂಜುನಾಥನೊಬ್ಬನೇ/ Obbane Obbane Manjunathanobbane

ಸಾಹಿತ್ಯ ಹಾಗು ಸಂಗೀತ ಸಂಯೋಜಕರು : ಶ್ರೀ ಹಂಸಲೇಖ 
ಗಾಯಕರು : ಶ್ರೀ ಎಸ್.ಪಿ.ಬಾಲಸುಬ್ರಮಣ್ಯಂ 




ಧ್ವನಿಸುರಳಿಯ ಕೊಂಡಿ / Hear the song 



ಒಬ್ಬನೇ....  ಒಬ್ಬನೇ .... ಮಂಜುನಾಥನೊಬ್ಬನೇ
ಒಬ್ಬನೇ, ಒಬ್ಬನೇ .... ಮಂಜುನಾಥನೊಬ್ಬನೇ
ಒಬ್ಬನೇ, ಒಬ್ಬನೇ .... ಮಂಜುನಾಥನೊಬ್ಬನೇ

ಜ್ಞಾನಕು, ಧ್ಯಾನಕು ಒಬ್ಬನೇ
ಭಕ್ತಿಗು, ಮುಕ್ತಿಗು ಒಬ್ಬನೇ ಅವನೊಬ್ಬನೇ
ಒಬ್ಬನೇ....  ಒಬ್ಬನೇ .... ಮಂಜುನಾಥನೊಬ್ಬನೇ

ನೀನೊಂದು ಕಲ್ಲು ಎಂದೆ, ನೀನೆಲ್ಲೂ ಇಲ್ಲವೆಂದೆ
ಮಂಜುನಾಥ, ಮಂಜುನಾಥ
ನೀನೇ ನನ್ನ ಬಳಿಗೆ ಬಂದು, ನಿನ್ನಲ್ಲೇನೇ ಇರುವೆನೆಂದೇ
ನನ್ನ ಕಣ್ಣ ತೆರೆತೆರೆದು, ಒಳಗಣ್ಣ ತೋರಿಸಿದೆ
ಮಂಜುನಾಥ, ಮಂಜುನಾಥ
ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂಮಿಗಿಳಿದೆ
ಪೊರೆಯನು ತೆರೆಯಲು ಒಬ್ಬನೇ
ಪೊರೆಯಲು ನಮ್ಮನು, ಒಬ್ಬನೇ, ಹರನೊಬ್ಬನೇ
ಒಬ್ಬನೇ....  ಒಬ್ಬನೇ .... ಮಂಜುನಾಥನೊಬ್ಬನೇ

ಶಂಕರ ಶಂಕರ ಹರಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯಜಯ ಶಂಭೋ ಜಯಜಯ ಚಂದ್ರಧರ
ಜಯಜಯ ಶಂಭೋ ಜಯಜಯ ಗಂಗಧರ

ತಂದೆಯಿಲ್ಲದೋನೆ ಎಂದೆ , ತಂದೆಯಾಗಿ ನೀನು ಬಂದೆ
ಮಂಜುನಾಥ, ಮಂಜುನಾಥ
ನಾನು ಅನ್ನೋ ಅಹಂಕಾರ, ಸುಟ್ಟು ಭಸ್ಮ ಮಾಡಿದೋನೇ
ಮಂಜನ್ನು ದೀಪ ಮಾಡಿ, ಹೊಸ ಜನ್ಮವನ್ನೇ ತಂದೆ
ಮಂಜುನಾಥ, ಮಂಜುನಾಥ
ಅರಿವಿಗೇನೇ ಗುರುವು ಆದ, ಗುರುಗಳ ಗುರು ಇವನೇ
ಸತ್ಯವೂ, ನಿತ್ಯವೂ ಒಬ್ಬನೇ
ಧರ್ಮವೂ, ದೈವವೂ ಒಬ್ಬನೇ
ಶಿವನೊಬ್ಬನೇ ........

ಶಂಕರ ಶಂಕರ ಹರಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯಜಯ ಶಂಭೋ ಜಯಜಯ ಚಂದ್ರಧರ
ಶಂಕರ......
ಜಯಜಯ ಶಂಭೋ ಜಯಜಯ ಗಂಗಧರ
ಮುರಹರ
ಜಯಜಯ ಶಂಭೋ ಜಯಜಯ ಗೌರಿವರ
ಶಂಭೋ
ಜಯಜಯ ಶಂಭೋ ಜಯಜಯ ಗೌರಿವರ
ಹರಹರ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ

Thursday, August 3, 2017

ಹೇ ನವಿಲೇ...ಹೆಣ್ನವಿಲೇ..../Hey Navile HenNavile


ಸಾಹಿತ್ಯ ಹಾಗು ಸಂಗೀತ ಸಂಯೋಜಕರು : ಹಂಸಲೇಖ 
ಗಾಯಕರು : ಶ್ರೀ ಎಸ್.ಪಿ.ಬಾಲಸುಬ್ರಮಣ್ಯಂ 


ಧ್ವನಿಸುರಳಿಯ ಕೊಂಡಿ / Hear the song 

ಹೇ ನವಿಲೇ ..... ಹೆಣ್ನವಿಲೇ.... 
ಹೇ ನವಿಲೇ ನವಿಲೇ
ಹೆಣ್ನವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಹೇ ನವಿಲೇ.....  ಹೆಣ್ನವಿಲೇ
ಹೇ ನವಿಲೇ ನವಿಲೇ
ಹೆಣ್ನವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ನವಿಲೇ ನವಿಲೇ

ಆಕಾಶ ಕಾಣುವ, ಮಳೆ ಬಿಸಿಲು ಬೀಳುವ
ಆಕಾಶ ಕಾಣುವ, ಮಳೆ ಬಿಸಿಲು ಬೀಳುವ
ಮನೆಗೆಂದು ನೀನು ಬರುವೆ, ಬರುವೆ
ನಿನಗಾಗಿ ನಾನಿಲ್ಲಿ ಕಾದಿರುವೆನು
ಮನೆಯಂತೆ ಮನಸ್ಸನ್ನು ತೆರೆದಿರುವೆನು
ನಿನ್ನ ಪ್ರೀತಿಯ ನಂಬಿ ಬದುಕಿರುವೆನು

ಹೇ ನವಿಲೇ.....  ಹೆಣ್ನವಿಲೇ
ಹೇ ನವಿಲೇ ನವಿಲೇ
ಹೆಣ್ನವಿಲೇ ನವಿಲೇ
ಬಾ ನವಿಲೇ ನವಿಲೇ
ಬಾರೆ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ

ಬಾರೋ ನನ್ನ ರಾಜ ನನ್ನ ರಾಜ

ನೀನಿಲ್ಲಿ ಬಂದಿರೆ, ಹೂನಗುವ ತಂದಿರೆ
ನೀನಿಲ್ಲಿ ಬಂದಿರೆ, ಹೂನಗುವ ತಂದಿರೆ
ನೋಡಲ್ಲಿ ತಾರೆ ನಾಚಿದೆ, ಮಿಂಚದೆ
ಆ ತಾರೆ ಏನಾದರೇನಾಯಿತು
ನೀ ದೂ...ರ ಹೋಗದೆ ಇದ್ದರಾಯಿತು
ನೀನಾಯಿತು ಇನ್ನು ನಾನಾಯಿತು

ಹೇ ನವಿಲೇ.....  ಹೆಣ್ನವಿಲೇ
ಹೇ ನವಿಲೇ ನವಿಲೇ
ಹೆಣ್ನವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ಬಾರೆ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ

Friday, June 23, 2017

ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು / Aadisi nodu Beelisi nodu

ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಪಿ.ಬಿ.ಶ್ರೀನಿವಾಸ್ 
ಕಲಾವಿದರು: ಡಾ.ರಾಜ್ ಕುಮಾರ್ 









ಧ್ವನಿಸುರಳಿಯ ಕೊಂಡಿ / Hear the song 


"ಕೊಟ್ಟಿದ್ದನ್ನ ನೆನಸ್ಕೊಬಾರ್ದು, ಕೊಡೋದನ್ನ ಮರಿಬಾರ್ದು" 

"ತತ್ವ ಅಡಗಿರುವ ಬೊಂಬೆ"

ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು   
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು
ಏನೇ ಬರಲಿ, ಯಾರಿಗು ಸೋತು, ತಲೆಯ ಬಾಗದು
ಎಂದಿಗೂ ನಾನು, ಹೀಗೆ ಇರುವೆ, ಎಂದು ನಗುವುದು, ಹೀಗೆ ನಗುತಲಿರುವುದು
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು

ಗುಡಿಸಲೇ ಆಗಲಿ, ಅರಮನೆಯಾಗಲಿ, ಆಟ ನಿಲ್ಲದು
ಹಿರಿಯರೆ ಇರಲಿ, ಕಿರಿಯರೆ ಬರಲಿ, ಭೇಧ ತೋರದು
ಗುಡಿಸಲೇ ಆಗಲಿ, ಅರಮನೆಯಾಗಲಿ, ಆಟ ನಿಲ್ಲದು
ಹಿರಿಯರೆ ಇರಲಿ, ಕಿರಿಯರೆ ಬರಲಿ, ಭೇಧ ತೋರದು
ಕಷ್ಟವೋ ಸುಖವೊ ಅಳುಕದೆ ಆಡಿ, ತೂಗುತಿರುವುದು ತೂಗುತಿರುವುದು
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು

ಮೈಯನೆ ಹಿಂಡಿ, ನೊಂದರು ಕಬ್ಬು, ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ, ತುಂಬಿ ಬರುವುದು
ಮೈಯನೆ ಹಿಂಡಿ, ನೊಂದರು ಕಬ್ಬು, ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ, ತುಂಬಿ ಬರುವುದು
ತಾನೆ ಉರಿದರು ದೀಪವು ಮನೆಗೆ, ಬೆಳಕ ತರುವುದು.. ದೀಪ ಬೆಳಕ ತರುವುದು..
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು

ಆಡಿಸುವಾತನ ಕೈಚಳಕದಲಿ, ಎಲ್ಲ ಅಡಗಿದೆ
ಆತನ ಕರುಣೆಯ ಜೀವವ ತುಂಬಿ, ಕುಣಿಸಿ ನಲಿಸಿದೆ
ಆಡಿಸುವಾತನ ಕೈಚಳಕದಲಿ, ಎಲ್ಲ ಅಡಗಿದೆ
ಆತನ ಕರುಣೆಯ ಜೀವವ ತುಂಬಿ, ಕುಣಿಸಿ ನಲಿಸಿದೆ
ಆ ಕೈ ಸೋತರೆ, ಬೊಂಬೆಯ ಕಥೆಯು, ಕೊನೆಯಾಗುವುದೇ ಕೊನೆಯಾಗುವುದೇ
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು
ಏನೇ ಬರಲಿ, ಯಾರಿಗು ಸೋತು, ತಲೆಯ ಬಾಗದು
ಎಂದಿಗೂ ನಾನು, ಹೀಗೆ ಇರುವೆ, ಎಂದು ನಗುವುದು, ಹೀಗೆ ನಗುತಲಿರುವುದು
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು

Tuesday, June 6, 2017

ಬೊಂಬೆ ಹೇಳುತೈತೆ / Bombe helutaite

ಸಾಹಿತ್ಯ : ಸಂತೋಷ್ ಆನಂದರಾಮ್
ಗಾಯಕರು : ಶ್ರೀ ವಿಜಯಪ್ರಕಾಶ್
ಸಂಗೀತ ಸಂಯೋಜಕರು : ವಿ.ಹರಿಕೃಷ್ಣ



ಧ್ವನಿಸುರಳಿಯ ಕೊಂಡಿ / Hear the song 


ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ 
ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

ಹೊಸ ಬೆಳಕೊಂದು, ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ, ರಾರಾಜಿಸೋ ರಾಜರತ್ನನು
ಆಡಿಸಿಯೇ ನೋಡು, ಬೀಳಿಸಿಯೇ ನೋಡು
ಎಂದು ಸೋಲದು, ಸೋತು ತಲೆಯಬಾಗದು

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

ಗುಡಿಸಲೆ ಆಗಲಿ ಅರಮನೆಯಾಗಲಿ ಆಟವೆ ನಿಲ್ಲದು, ಎಂದು ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧವೆ ತೋರದು, ಎಂದು ಬೇಧ ತೋರದು
ಎಲ್ಲ ಇದ್ದು, ಏನೂ ಇಲ್ಲದ ಹಾಗೆ ಬದುಕಿರುವ,
ಆಕಾಶ ನೋಡದ ಕೈಯೆ ನೆನದು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೆ
ನಿನ್ನನು ಪಡೆದ ನಾವು ಪುನೀತ ಬಾಳು ನಗುನಗುತ

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು, ನಂದಾದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು, ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ, ನೀನು ಬಂದೆ
ಯೋಗವು ಒಮ್ಮೆ, ಬರುವುದು ನಮಗೆ
ಯೋಗ್ಯತೆ ಒಂದೇ, ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ, ಈ ರಾಜನು ಒಬ್ಬ
ಆಡಿಸಿಯೇ ನೋಡು, ಬೀಳಿಸಿಯೇ ನೋಡು
ಎಂದು ಸೋಲದು, ಸೋತು ತಲೆಯಬಾಗದು

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

Friday, May 26, 2017

ಮುಕ್ತ ಮುಕ್ತ / Mukta Mukta

ಸಾಹಿತ್ಯ : ಶ್ರೀ ಹೆಚ್.ಎಸ್.ವೆಂಕಟೇಶ್ ಮೂರ್ತಿ
ಸಂಗೀತ ಸಂಯೋಜಕರು : ಶ್ರೀ ಸಿ. ಅಶ್ವಥ್
ಗಾಯಕರು : ಶ್ರೀ ವಿಜಯ ಪ್ರಕಾಶ್












ಧ್ವನಿಸುರಳಿಯ ಕೊಂಡಿ / Hear the song 

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ 
ಬೇವ ಆಗಿವೆ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹಸಿರ ತೋಳಿನಲಿ ಬೆಂಕಿಯ ಕೂಸ, ಪೊರೆವುದು ತಾಯಿಯ ಹೃದಯ
ಹಸಿರ ತೋಳಿನಲಿ ಬೆಂಕಿಯ ಕೂಸ, ಪೊರೆವುದು ತಾಯಿಯ ಹೃದಯ

ಮರೆಯುವುದುಂಟೆ ಮರೆಯಲಿ ನಿಂತೆ ಕಾಯುವ ಕರುಣಾಮಯಿಯ
ಮರೆಯುವುದುಂಟೆ ಮರೆಯಲಿ ನಿಂತೆ ಕಾಯುವ ಕರುಣಾಮಯಿಯ

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಆಗಿವೆ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹೂಮೊಗವಾಡದ ಇರಿಯುವ ಮುಳ್ಳೇ, ಎಲ್ಲಿ ಬರೆದೆ ನಿನ್ನಾಟ
ಹೂಮೊಗವಾಡದ ಇರಿಯುವ ಮುಳ್ಳೇ, ಎಲ್ಲಿ ಬರೆದೆ ನಿನ್ನಾಟ

ಬೆಳಕಿನ ಕೂಸಿಗೆ, ಕೆಂಡದ ಹಾಸಿಗೆ, ಕಲಿಸಿದೆ ಜೀವನ ಪಾಠ
ಬೆಳಕಿನ ಕೂಸಿಗೆ, ಕೆಂಡದ ಹಾಸಿಗೆ, ಕಲಿಸಿದೆ ಜೀವನ ಪಾಠ

ಇರುಳ ವಿರುದ್ಧ, ಬೆಳಕಿನ ಯುದ್ಧ, ಕೊನೆ ಇಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆಬೇಕು ಸೋಲಿಲ್ಲದ ಹೋರಾಟ

ಇರುಳ ವಿರುದ್ಧ, ಬೆಳಕಿನ ಯುದ್ಧ, ಕೊನೆ ಇಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆಬೇಕು ಸೋಲಿಲ್ಲದ ಹೋರಾಟ

Monday, April 24, 2017

ನಾನಿರುವುದೆ ನಿಮಗಾಗಿ / Naaniruvude nimagaagi



ಸಾಹಿತ್ಯ : ಚಿ.ಉದಯಶಂಕರ್
ಗಾಯಕರು: ಡಾ. ರಾಜ್ ಕುಮಾರ್





ನಾನಿರುವುದೆ  ನಿಮಗಾಗಿ || ೨ ||
ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ  || ೨ ||
ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲ || ೨ ||
ನಿಮ್ಮೊಡನಿಂದು ನಾನು ನೊಂದು
ನಿಮ್ಮೊಡನಿಂದು ನಾನು-ನೊಂದು
ಮಿಡಿದ ಕಂಬನಿ ಆರಿಲ್ಲ..
ಭರವಸೆ ನೀಡುವೆ ಇಂದು, ನಾ ನಿಮ್ಮೊಡನಿರುವೆನು ಎಂದು ..  || ೨ ||
ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೊಲ್ಲ

ನಾನಿರುವುದೆ ನಿಮಗಾಗಿ || ೨ ||
ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ , ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

ಸಾವಿರ ಜನುಮದ ಪುಣ್ಯವೊ ಏನೊ ನಾನೀ ನಾಡಲಿ ಜನಿಸಿರುವೆ  || ೨ ||
ತಪಿಸಿನ ಫಲವೋ, ಹಿರಿಯರ ವರವೋ
ತಪಿಸಿನ ಫಲವೋ-ಹಿರಿಯರ ವರವೋ
ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ, ಈ ನಾಡಿಗೆ ಬಿಡುಗಡೆ ತರುವ  || ೨ ||
ಜನತೆಗೆ ನೆಮ್ಮದಿ ಸೌಖ್ಯವ ತರುಲು ಪ್ರಾಣವನೇ ಕೊಡುವೆ

ನಾನಿರುವುದೆ ನಿಮಗಾಗಿ ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ , || ೨ ||
ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

Thursday, April 13, 2017

ಯಾವ ಕವಿಯು ಬರೆಯಲಾರ / Yaava kaviyu bariyalaara

ಸಾಹಿತ್ಯ : ಚಿ.ಉದಯಶಂಕರ್
ಗಾಯಕರು: ಡಾ. ರಾಜ್ ಕುಮಾರ್
















ಯಾವ ಕವಿಯು ಬರೆಯಲಾರ,
ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ,ಬರೆಯಲಾರ

ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ,

ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ

ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
ಜೇನಿಗಾಗಿ ತುಟಿಗಳೇರಡು ಸನಿಹ ಸೇರುವಂತೆ 

ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ 
ಯಾವ ಕವಿಯು ಬರೆಯಲಾರ,ಬರೆಯಲಾ...ರ




ಎಲ್ಲಾದರೂ ಇರು ಎಂತಾದರು ಇರು / Ellaadaru iru Entaadaru iru

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಡಾ. ರಾಜ್ ಕುಮಾರ್
ಸಂಗೀತ ಸಂಯೋಜನೆ : ಸಿ.ಅಶ್ವಥ್ 














ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು 
ಕನ್ನಡವೇ ಸತ್ಯ ಕನ್ನಡವೇ ನಿತ್ಯ 
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನೀ ಮೆಟ್ಟುವ ನೆಲ ಅದೇ ಕರ್ನಾಟಕ,  ನೀನೇರುವ ಮಲೆ ಸಹ್ಯಾದ್ರಿ
ನೀ ಮೆಟ್ಟುವ ನೆಲ ಅದೇ ಕರ್ನಾಟಕ,  ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ, ನೀ ಕುಡಿಯುವ ನೀರ್ ಕಾವೇರಿ 
ಪಂಪನನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ
ಕುಮಾರವ್ಯಾಸನ ಆಲಿಪ ಕಿವಿ ಅದು ಕನ್ನಡವೇ ನಿತ್ಯ
ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು

ಹರಿಹರ ರಾಘವರಿಗೆ ಎರಗುವ ಮನ, ಹಾಳಾಗಿಹ ಹಂಪೆಗೆ ಕೊರಗುವ ಮನ
ಹರಿಹರ ರಾಘವರಿಗೆ ಎರಗುವ ಮನ, ಹಾಳಾಗಿಹ ಹಂಪೆಗೆ ಕೊರಗುವ ಮನ
ಪೆ೦ಪಿನ ಬನವಾಸಿಗೆ ಕರಗುವ ಮನ, ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೋಗದ ಜಲಪಾತದಿ ಧುಮುಕುವ ಮನ, ಮಲೆನಾಡಿಗೆ ಹೊಂಪುಳಿ ಹೋಗುವ ಮನ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ, ಮಲ್ಲಿಗೆ ಸಂಪಿಗೆ, ಕೇದಗೆ ಸೊಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ,
ರಸರೊಮಾಂಚನಗೊಳುವ ತನುಮನ
ಎಲ್ಲಿದ್ದರೆ ಏನ್, ಎಂತಿದ್ದರೆ ಏನ್ 
ಎಂದೆಂದಿಗೂ ತಾನ್ ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಅನ್ಯವೆನಲದೆ ಮಿಥ್ಯ 
ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ

Monday, March 27, 2017

ಇದೆ ಸಮಯ ಹರಿಯೇ/ Ide samaya hariye

ಸಾಹಿತ್ಯ    : ಶ್ರೀ ವಿಜಯ ದಾಸರು 
ಗಾಯಕರು: ಶ್ರೀ ರಾಯಚೂರು ಶೇಷಗಿರಿ ದಾಸ್


ಧ್ವನಿಸುರಳಿಯ ಕೊಂಡಿ / Hear the song


ಇದೆ ಸಮಯ ಹರಿಯೇ, ಹರಿಯೇ 
ಇದೆ ಸಮಯ ಹರಿಯೇ, ಹರಿಯೇ  
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 

ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ನಾನಾ ಯೋನಿಯಲಿ ಬಂದು ಜ್ಞಾನದೊಲ್ಲಭನಾಗಿ 
ನಾನಾ ಯೋನಿಯಲಿ ಬಂದು ಜ್ಞಾನದೊಲ್ಲಭನಾಗಿ 
ಹೀ.ನನಾದವಗೆ,  ಹೀನನಾದವಗೆ ಸುಜ್ಞಾನ ಪಾಲಿಸುವುದಕೆ
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ಆಶಾಪಾಶ.ಕೆ ಸಿಲುಕಿ ಶ್ರೀಶನ ಮರೆತೆನು 
ಆಶಾಪಾಶ.ಕೆ ಸಿಲುಕಿ ಶ್ರೀಶನ ಮರೆತೆನು
ಲೇ.ಸು ದಾರಿಯ ತೋರಿ 
ಲೇಸು ದಾರಿಯ ತೋರಿ 
ದಾಸನ ಕಾಯುವುದಕೆ 
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ಸಂತರ ಸಂಘವ ಸಂತತ ಪಾಲಿಸು 
ಸಂತರ ಸಂಘವ ಸಂತತ ಪಾಲಿಸು 
ಅಂತರಂಗದಿ ನಿನ್ನ 
ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ 
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ಹಿಂದಿನ ಸುಕ್ರುತದಿ ಬಂದೆ ಭೂಸುರನಾಗಿ 
ಹಿಂದಿನ ಸುಕ್ರುತದಿ ಬಂದೆ ಭೂಸುರನಾಗಿ 
ಮುಂದಿನ ಪದಕಾಗಿ 
ಮುಂದಿನ ಪದಕಾಗಿ ಕುಂದದೆ ಸಲಹುದಕೆ 
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ಶ್ರೀಪತಿ ವಿಜಯ ವಿಠ್ಠಲ ವೆಂಕಟ 
ಶ್ರೀಪತಿ ವಿಜಯ ವಿಠ್ಠಲ ವೆಂಕಟ 
ಪಾಪವ ಕಳೆದೆನ್ನ 
ಪಾಪವ ಕಳೆದೆನ್ನ ಕಾಪಾಡುವುದಕೆ 
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ    
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 

ಇದೆ ಸಮಯ. ಹರಿಯೇ, ಹರಿಯೇ ಹರಿಯೇ

ಕೂಸಿನ ಕಂಡೀರಾ / Koosina kandeera

ಸಾಹಿತ್ಯ    : ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ 

















ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
.... 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀ..ರಾ 

ಅಂಜನೆ ಉದರದಿ ಜನಿಸಿತು ಕೂಸು 
ರಾ.ಮರ ಪಾದಕ್ಕೆರಗಿತು ಕೂಸು 
ಅಂಜನೆ ಉದರದಿ ಜನಿಸಿತು ಕೂಸು 
ರಾಮರ ಪಾದಕ್ಕೆರಗಿತು ಕೂಸು 
ಸೀ..ತೆಗೆ ಉಂಗುರ ಕೊಟ್ಟಿತು ಕೂಸು 
ಸೀ..ತೆಗೆ ಉಂಗುರ ಕೊಟ್ಟಿತು ಕೂಸು 
ಲಂಕಾಪುರವನೆ ಸುಟ್ಟಿತು ಕೂಸು 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀ..ರಾ 

ಭಂಡಿ ಅನ್ನವ ನುಗಿತು ಕೂಸು 
ಬಕನ ಪ್ರಾಣವ ಕೊಂದಿತು ಕೂಸು 
ಭಂಡಿ ಅನ್ನವ ನುಗಿತು ಕೂಸು 
ಬಕನ ಪ್ರಾಣವ ಕೊಂದಿತು ಕೂಸು 
ವಿಷದ ಲಡ್ಡುಗೆಯ ಮೆದ್ದಿತು ಕೂಸು 
ವಿಷದ ಲಡ್ಡುಗೆಯ ಮೆದ್ದಿತು ಕೂಸು 
ಮಡದಿಗೆ-ಪುಷ್ಪವ ಕೊಟ್ಟಿತು ಕೂಸು 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀ..ರಾ 

ಮಾಯವೆಲ್ಲವ ಗೆದ್ದಿತು ಕೂಸು 
ಮಧ್ವಮತವನುದ್ಧರಿಸಿತು ಕೂಸು 
ಮಾಯವೆಲ್ಲವ ಗೆದ್ದಿತು ಕೂಸು 
ಮಧ್ವಮತವನುದ್ಧರಿಸಿತು ಕೂಸು 
ಪುರಂದರವಿಠ್ಠಲನ ದಯದಿಂದ ಕೂಸು 
ಪುರಂದರವಿಠ್ಠಲನ ದಯದಿಂದ ಕೂಸು 
ಸುಮ್ಮನೆ-ಉಡುಪಿಲಿ ನಿಂತಿತು ಕೂಸು 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀ..ರಾ 

ಯೋಚ್ನೆ ಮಾಡ್ಬೇಡ / Yochne maadbeda


ಸಾಹಿತ್ಯ      : ಶ್ರೀ ಉಪೇಂದ್ರ ರಾವ್
ಗಾಯಕರು  : ಶ್ರೀ ವಿಜಯ ಪ್ರಕಾಶ್ 
ಸಂಗೀತ     : ಶ್ರೀ ಗುರುಕಿರಣ್




ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋಗ್ಲಿ , ಯೋಚ್ನೆ ಮಾಡ್ಬೇಡ
ನಂಬ್ಕೊಂಡ್ ಇದಿದ್ ಫ್ರೆಂಡ್ಸು ಕೈಕೊಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಹುಟ್ಸಿದ್ ಮಕ್ಳು ಓದ್ ದೇ ದಬಾಕ್ ಕೊಳ್ಲಿ, ಯೋಚ್ನೆ ಮಾಡ್ಬೇಡ
ಕಟ್ಸಿದ್ ಮನೆ ಬಿದ್ದು ಏಕುಟ್ಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ
ತುಂಬಾ ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ

ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋಗ್ಲಿ , ಯೋಚ್ನೆ ಮಾಡ್ಬೇಡ
ನಂಬ್ಕೊಂಡ್ ಇದಿದ್ ಫ್ರೆಂಡ್ಸು ಕೈಕೊಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ
ತುಂಬಾ ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ

ಉಪ್ಪಿಟು ಉಪ್ಪಿಟು ಉಪ್ಪಿಟು ಉಪ್ಪಿಟು
ಉಪ್ಪಿಟು ೨ ಉಪ್ಪಿಟು ೨ ಉಪ್ಪಿಟು ೨ ಉಪ್ಪಿಟು ೨

ಹೊಟ್ಟೆ ಹಸ್ದಾಗ ಹೊಟ್ಟೇನೆ ಕೇಳ್ತದೆ, ಟೈಮ್ ಆಯಿತೂಂತ ಯೋಚ್ನೆ ಮಾಡಿ ಯಾಕೆ ಉಣ್ತೀಯ
ಬೇಕೆಂದಾಗ ಬಾಯಿ ಮಾತಾಡ್ತದೆ, ಯೋಚ್ನೆ ಮಾಡಿ ಬಾಯ್ ಬಿಟ್ಯಾಕೆ ಬಂಡ ಆಗ್ತೀಯ
ಬಾಡಿಲೈತೆ ಆಟೋ ಮೆಕ್ಯಾನಿಸಂ, ಸೆಲ್ಫು ಡ್ರೈವು ಮಾಡಿ ಯಾಕೆ ಕ್ರ್ಯಾಶು ಮಾಡ್ತೀಯ

ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋಗ್ಲಿ , ಯೋಚ್ನೆ ಮಾಡ್ಬೇಡ
ನಂಬ್ಕೊಂಡ್ ಇದಿದ್ ಫ್ರೆಂಡ್ಸು ಕೈಕೊಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಹುಟ್ಸಿದ್ ಮಕ್ಳು ಓದ್ ದೇ ದಬಾಕ್ ಕೊಳ್ಲಿ, ಯೋಚ್ನೆ ಮಾಡ್ಬೇಡ
ಕಟ್ಸಿದ್ ಮನೆ ಬಿದ್ದು ಏಕುಟ್ಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ
ತುಂಬಾ ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ

ತಣ್ಣಗ್ ತಾನೇ ತಲೆ ಕೆಲ್ಸ ಮಾಡ್ತದೆ, ಬೆಂಕಿ ಹಾಕಿ ತಲೆ ಓಲೆ ಯಾಕೆ ಮಾಡ್ತೀಯ
ಟೋಟಲ್ ಬಾಡಿ ಇಲ್ಲೆ ಇದ್ದಾಗ, ಬ್ರೈನ್ನ ಯಾಕೆ ಫುಟ್ಬಾಲ್ ತರ ಯಾಕೆ ಒದಿತೀಯ
ಯೋಚ್ನೆ ನಿಲ್ಸಕ್ ಆಗಲ್ಲ ಅಂದ್ರೆ, ಕೆಲ್ಸದ್ ಬಗ್ಗೆ ಯೋಚ್ನೆ ಮಾಡು ಮುಗ್ದೋಯ್ತು ತೊಂದ್ರೆ  

ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋಗ್ಲಿ , ಯೋಚ್ನೆ ಮಾಡ್ಬೇಡ
ನಂಬ್ಕೊಂಡ್ ಇದಿದ್ ಫ್ರೆಂಡ್ಸು ಕೈಕೊಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಹುಟ್ಸಿದ್ ಮಕ್ಳು ಓದ್ ದೇ ದಬಾಕ್ ಕೊಳ್ಲಿ, ಯೋಚ್ನೆ ಮಾಡ್ಬೇಡ
ಕಟ್ಸಿದ್ ಮನೆ ಬಿದ್ದು ಏಕುಟ್ಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ
ತುಂಬಾ ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ