Sunday, November 1, 2015

ಕರ್ನಾಟಕದ ಇತಿಹಾಸದಲಿ / Karnatakada Itihaasadali

ಸಾಹಿತ್ಯ    : ಆರ್.ಎನ್.ಜಯಗೋಪಾಲ್
ಗಾಯಕರು : ಎಸ್.ಪಿ.ಬಾಲಸುಬ್ರಮಣ್ಯಂ
ಚಲನಚಿತ್ರ : ಕೃಷ್ಣ ರುಕ್ಮಿಣಿ











ಧ್ವನಿಸುರಳಿಯ ಕೊಂಡಿ / Hear the song 

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ

ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿಯಿದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿಯಿದು
ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ
ವಿಜಯದ ಕಹಳೆಯ ಊದಿದರು
ವಿಜಯನಗರ ಸ್ಥಾಪನೆ ಮಾಡಿದರು

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ

ಗಂಡರ ಗಂಡ ಧೀರ ಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೆ
ಗಂಡರ ಗಂಡ ಧೀರ ಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೆ
ಕಲಿಗಳ ನಾಡು ಕವಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ
ಕನ್ನಡ ಬಾವುಟ ಹಾರಿಸಿದ
ಮಧುರೆವರೆಗು ರಾಜ್ಯವ ಹರಡಿಸಿದ
ಕರ್ನಾಟಕದ ಇತಿಹಾಸದಲಿ

ಸಂಗೀತ ನಾಟ್ಯಗಳ ಸಂಗಮವಿಲ್ಲೇ ಶಿಲ್ಪಾಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೇ ಶಿಲ್ಪಾಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೇ, ಯತಿಗಳ ದಾಸರ ನೆಲೆನಾಡಿಲ್ಲೇ
ಪಾವನ ಮಣ್ಣಿದು ಹಂಪೆಯದು, ಯುಗಯುಗ ಅಳಿಯದ ಕೀರ್ತಿಯಿದು
ಕನ್ನಡ ಭೂಮಿ, ಕನ್ನಡ ನುಡಿಯು, ಕನ್ನಡ ಪ್ರೀತಿ ಎಂದೆಂದೂ ಬಾಳಲಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ

Saturday, July 25, 2015

ಹೊಸ ಬಾಳಿಗೆ ನೀ ಜೊತೆಯಾದೆ / Hosabaalige Baalige nee Joteyaade

ಸಾಹಿತ್ಯ:  ಚಿ.ಉದಯಶಂಕರ
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ
ಚಲನಚಿತ್ರ: ನಾ ನಿನ್ನ ಬಿಡಲಾರೆ










ಧ್ವನಿಸುರಳಿಯ ಕೊಂಡಿ / Hear the song 


ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ ।।೨।।
ಹೊಸ ರಾಗ,  ಹೊಸ ತಾಳ, ಹೊಸ ಭಾವಗೀತೆಯೆ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಹೊಸ ರಾತ್ರಿ ಮೂಡಿಬಂದು, ಹೊಸ ಆಸೆ ನೂರು ತಂದು
ಹೊಸ ಸ್ನೇಹದಿಂದ ಬೆಸೆದು, ಹೊಸ ರಾಗ ಮೀಟಿ ಇಂದು
ಹಿತ ನೀಡಿದೆ, ಸುಖ ತೋರಿದೆ, ಮನಸಲ್ಲಿ ಉಲ್ಲಾಸ ತಂದು
ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಆ ಆ ಆ

ನಸುನಾಚಿದಾಗ ಮೊಗವು, ಕೆಂಪಾದ ಹೊನ್ನ ಹೂವು
ಆ ಆ ಆ
ನಡೆವಾಗ ನಿನ್ನ ನಡುವು, ಲತೆಯಂತೆ ಆಡೊ ಚೆಲುವು
ಕಣ್ತುಂಬಿತು, ಮನ ತುಂಬಿತು, ಅನುರಾಗ ನನ್ನಲ್ಲಿ ತಂದು
ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಹೂಮಂಚ ಹೀಗೆ ಇರಲಿ, ಈ ಮಲ್ಲಿಗೆ ಬಾಡದಿರಲಿ,
ಈ ರಾತ್ರಿ ಜಾರದಿರಲಿ, ಹಗಲೆಂದು ಮೂಡದಿರಲಿ,
ಬೆಳದಿಂಗಳ ಈ ಬೊಂಬೆ, ಬಳಿಯಲ್ಲಿ ಎಂದೆಂದು ಇರಲಿ

ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ರಾಗ,
ಹೊಸ ತಾಳ,
ಹೊಸ ಭಾವಗೀತೆಯೆ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ, ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

Sunday, May 10, 2015

ಅಮ್ಮ ಅಮ್ಮ ಅಮ್ಮ ನನ್ನಮ್ಮ

ಅಮ್ಮ ಅಮ್ಮ ಅಮ್ಮ ನನ್ನಮ್ಮ ।।೨।।
ನಾ ಅಮ್ಮ ಎಂದಾಗ ಏನೋ ಸಂತೋಷವು ।।೨।।
ನಿನ್ನ ಕಂಡಾಗ ಮನಕೇನೋ ಆನಂದವು
ಅಮ್ಮ ಅಮ್ಮ ಅಮ್ಮ ನನ್ನಮ್ಮ

ಹಾಲಿನ ಸುಧೆಯು ನಿನ್ನೆಯ ಮನಸು, ಜೇನಿನ ಸವಿಯು ನಿನ್ನ ಮಾತು ।।೨।।
ಪುಣ್ಯದ ಫಲವೋ ದೇವರ ವರವೋ ಸೇವೆಯ ಭಾಗ್ಯ ನನ್ನದಾಯ್ತು
ಅಮ್ಮ ಅಮ್ಮ ಅಮ್ಮ ನನ್ನಮ್ಮ

ತಾಯಿಯ ಮಮತೆ ಕಂಡ ದೇವನು ಅಡಿಗಿದ ಎಲ್ಲೋ ಮರೆಯಾಗಿ ।।೨।।
ತಾಯಿಯ ಶಾಂತಿಗೆ ಧರಣಿಯು ನಾಚಿ ಮೌನದಿ ನಿಂತಳು ತಲೆಬಾಗಿ
ಅಮ್ಮ ಅಮ್ಮ ಅಮ್ಮ ನನ್ನಮ್ಮ ।।೨।।
ನಾ ಅಮ್ಮ ಎಂದಾಗ ಏನೋ ಸಂತೋಷವು ।।೨।।
ನಿನ್ನ ಕಂಡಾಗ ಮನಕೇನೋ ಆನಂದವು
ಅಮ್ಮ ಅಮ್ಮ ಅಮ್ಮ ನನ್ನಮ್ಮ
ಅಮ್ಮ ಅಮ್ಮ ಅಮ್ಮ ನನ್ನಮ್ಮ
ಅಮ್ಮ ನನ್ನಮ್ಮ
ಮ್ ಮ್ ಮ್ ಮ್

Friday, April 17, 2015

ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ / Iduvarege Neenenna Kai hididu Nadesiruve

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಶಶಿಧರ ಕೋಟೆ 






ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು ಎಂದಿಗೂ ಕೈ ಬಿಡದೆ ಸಲಹೈ ಗುರು ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು

ವೈರಾಗ್ಯ ಒಂದು ಕಡೆ, ತನ್ನ ಮಹಿಮೆಯ ತೋರಿ ಕೈಚಾಚಿ ಕರೆಯುತ್ತಿದೆ ।।೨।।
ಸೌಂದರ್ಯ ಒಂದು ಕಡೆ, ತನ್ನ ಮೋಹವ ಬೀರಿ ಮೈ ಚಾಚಿ ಸೆಳೆಯುತ್ತಿದೆ ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು

ಒಂದು ಕಡೆ ಸ್ವಾತಂತ್ರ್ಯ ಒಂದು ಕಡೆ ಮಾಧುರ್ಯ ನಡುವಿಹೆನು ಬಟ್ಟೆಗೆಟ್ಟು
ಮುಕ್ತಿಯನ್ನೋಪ್ಪಲೋ ? ಮಾಯೆಯನ್ನಪ್ಪಲೋ ? ತಿಳಿದ ನೀನನ್ನನಟ್ಟು ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು ಎಂದಿಗೂ ಕೈ ಬಿಡದೆ ಸಲಹೈ ಗುರು
ಎಂದಿಗೂ ಕೈ ಬಿಡದೆ ಸಲಹೈ ಗುರು ।।೨।।

ಧ್ವನಿಸುರಳಿಯ ಕೊಂಡಿ / Hear the song 

ಕ್ಲಿಷ್ಟ ಪದಗಳಾರ್ಥ:
-----------------
ಬಟ್ಟೆಗೆಟ್ಟು : ದಾರಿತಪ್ಪಿ

Wednesday, April 15, 2015

ದಾರಿ ತೋರೆನಗೆ ಗುರುವೇ / Daari torenage guruve

ಸಾಹಿತ್ಯ: ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಶಿವಮೊಗ್ಗ ಸುಬ್ಬಣ್ಣ



















ಧ್ವನಿಸುರಳಿಯ ಕೊಂಡಿ / Hear the song 

ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ ।।೨।।
ದಾರಿ ತೋರೆನಗೆ ಗುರುವೇ

ಕವಲೊಡೆದ ಹಾದಿಗಳು, ಕವಿದಿಹುದು ಕತ್ತೆಲೆಯು, ಕಿವಿಗೊಟ್ಟು ಕೇಳಿದರೆ, ಕರೆವ ದನಿಯಿಲ್ಲ ।।೨।।
ಕಣ್ಣಿಟ್ಟು ನೋಡಿದರೆ ಹೊಳೆವ ಸೊಡರಿಲ್ಲ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ

ತಿಮಿರವನು ಕುಡಿ ಕುಡಿದು ಮುಳುಗಿಹವು ಮೂರ್ಚೆಯಲಿ, ಬನಬಯಲು ಭುವಿಬಾನು ಹೊಳೆಕೆರೆಗಳೆಲ್ಲ ।।೨।।
ಭೀಕರದ ಮೌನದಲಿ ಬಗೆಹರಿವುದಿಲ್ಲ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ

ಹೆಪ್ಪುಗಟ್ಟಿಹುದಿರುಳು ಮರಳಿನಲಿ ಕೆಸರಿನಲಿ, ಮುಂದೆ ತೆರಳಿದ ಜನರ ಹೆಜ್ಜೆಗಳ ಕಾಣೆ ।।೨।।
ಕತ್ತಲಲಿ ಕೈಹಿಡಿದು ಕಾಯುವರ ಕಾಣೆ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ


ಕ್ಲಿಷ್ಟ ಪದಗಳಾರ್ಥ:
-----------------

ಸೊಡರು :  ದೀಪ
ತಿಮಿರ   :  ಕತ್ತಲು, ಅಂಧಕಾರ

Saturday, February 7, 2015

ಸೌಂದರ್ಯವೆನ್ನ ಹರಿ ಸೌಂದರ್ಯವೆನ್ನ ಹರ / Soundaryavenna hari Soundaryavenna hara

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ಸೌಂದರ್ಯವೆನ್ನ ಹರಿ ಸೌಂದರ್ಯವೆನ್ನ ಹರ ಸೌಂದರ್ಯವೆನ್ನ ಅವ್ಯಕ್ತ ಬ್ರಹ್ಮ 
ಸೌಂದರ್ಯವೆನ್ನ ಅವ್ಯಕ್ತ ಬ್ರಹ್ಮ ।।೨।।
ಸೌಂದರ್ಯವೆ ಪುಣ್ಯ ಸೌಂದರ್ಯವೆ ಸ್ವರ್ಗ ।।೨।।
ಸೌಂದರ್ಯವೆ ನನ್ನ ಚರಮ ಮೋಕ್ಷ ।।೨।।

ಸೌಂದರ್ಯವಿಲ್ಲದಿಹ ಲೋಕರೌರವ ನರಕ 
ಸೌಂದರ್ಯವಿರೆ ನರಕವದುವೇ ನಾಕ 
ಸೌಂದರ್ಯಕಿಂತಲದಿ ಕಟರ ದೇವರು ಇಲ್ಲ 
ಸೌಂದರ್ಯವಿಲ್ಲದಿರೆ ದೇವರಿಲ್ಲ ।।೨।।

ನನ್ನಾತ್ಮ ಸೌಂದರ್ಯ ನಿನ್ನಾತ್ಮ ಸೌಂದರ್ಯ
ನಾನಿಲ್ಲ ನೀನಿಲ್ಲ ಸೌಂದರ್ಯಮಿಹುದೆಲ್ಲ 
ಸೌಂದರ್ಯವಾನಂದ ಸೌಂದರ್ಯವೈಶ್ವರ್ಯ ।।೨।।
ವಿಶ್ವಕ್ಕೆ ತಾಯೂರು ಬಲ್ಲೆಯೇನ್ಸೌಂದರ್ಯ ।।೨।।

Friday, February 6, 2015

ತನುವು ನಿನ್ನದು, ಮನವು ನಿನ್ನದು / Tanuvu ninnadu manavu ninnadu

ಸಾಹಿತ್ಯ     : ರಾಷ್ಟ್ರಕವಿ ಕುವೆಂಪು   
ಗಾಯಕರು : ಶ್ರೀ ಮೈಸೂರು ಅನಂತಸ್ವಾಮಿ














ಧ್ವನಿಸುರಳಿಯ ಕೊಂಡಿ / Hear the song 

ತನುವು ನಿನ್ನದು, ಮನವು ನಿನ್ನದು ।।೨।।
ಎನ್ನ ಜೀವನ ಧನ ನಿನ್ನದು 
ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು 
ತನುವು ನಿನ್ನದು, ಮನವು ನಿನ್ನದು

ನೀನು ಹೊಳೆದರೆ ನಾನು ಹೊಳೆವೆನು 
ನೀನು ಬೆಳೆದರೆ ನಾನು ಬೆಳೆವೆನು 
ನೀನು ಹೊಳೆದರೆ ನಾನು ಹೊಳೆವೆನು 
ನೀನು ಬೆಳೆದರೆ ನಾನು ಬೆಳೆವೆನು 
ನನ್ನ ಹರಣದ ಹರಣ ನೀನು 
ನನ್ನ ಮರಣದ ಮರಣವು ।।೨।।
ತನುವು ನಿನ್ನದು, ಮನವು ನಿನ್ನದು

ನನ್ನ ಮನದಲಿ ನೀನೆ ಯುಕ್ತಿ 
ನನ್ನ ಹೃದಯದಿ ನೀನೆ ಭಕ್ತಿ 
ನನ್ನ ಮನದಲಿ ನೀನೆ ಯುಕ್ತಿ 
ನನ್ನ ಹೃದಯದಿ ನೀನೆ ಭಕ್ತಿ 
ನೀನೆ ಮಾಯಾಮೋಹ ಶಕ್ತಿಯು 
ನನ್ನ ಜೀವನ ಮುಕ್ತಿಯು ।।೨।। 
ತನುವು ನಿನ್ನದು, ಮನವು ನಿನ್ನದು
ತನುವು ನಿನ್ನದು ।।೩।।
ಮನವೂ ನಿನ್ನದು

Wednesday, February 4, 2015

ನೇಗಿಲಯೋಗಿ: ಉಳುವಾ ಯೋಗಿಯ ನೋಡಲ್ಲಿ / Negilayogi: Uluvaa yogiya nodalli

"ನೇಗಿಲಯೋಗಿ"
ಸಾಹಿತ್ಯ   : ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ನೇಗಿಲ ಹಿಡಿದಾ ಹೊಲದೊಳು ಹಾಡುತ 
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಶೃಷ್ಟಿನಿಯಮದೊಳಗವನೇ ಭೋಗಿ
ಉಳುವ ಯೋಗಿಯ ನೋಡಲ್ಲಿ  ।।೨।।

ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ।।೨।।
ಬಿತ್ತುಳುವುದನವ ಬಿಡುವುದೆ ಇಲ್ಲ ।।೨।।
ಉಳುವಾ ಯೋಗಿಯ ನೋಡಲ್ಲಿ

ಯಾರು ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು ।।೨।।
ಹೆಸರು ಬಯಸದೆ ಅತಿ ಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲಕುಳದೊಳಗಡಗಿದೆ ಕರ್ಮ
ನೇಗಿಲ ಮೇಲೆ ನಿಂತಿದೆ ಧರ್ಮ
ಉಳುವಾ ಯೋಗಿಯ ನೋಡಲ್ಲಿ ।।೩।।



ನೂರು ದೇವರನೆಲ್ಲ ನೂಕಾಚೆ ದೂರ / Nooru devaranella nookaache doora

ಸಾಹಿತ್ಯ   : ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಸಿ.ಅಶ್ವಥ್
















ಧ್ವನಿಸುರಳಿಯ ಕೊಂಡಿ / Hear the song 

ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಿ ಆಯ್ತು
ಹಾವ್ಗಳಿಗೆ ಹಾಲೆರದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿ ಆಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯಾನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಓಯ್ದು
ಚಳಿಯು ಮಳೆಯಲಿ ನಮೆವ ತಾಯ್ಗೆ ಹಾಕು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ನೂಕಾಚೆ ದೂರ

Friday, January 30, 2015

ಮುಚ್ಚುಮರೆಯಿಲ್ಲದೆಯೆ ನಿನ್ನಮುಂದೆಲ್ಲವನು / Mucchumare Illadeye ninnamundellavanu

ಸಾಹಿತ್ಯ      : ರಾಷ್ಟ್ರಕವಿ ಕುವೆಂಪು  
ಗಾಯಕರು : ರಾಜು ಅನಂತಸ್ವಾಮಿ 















ಧ್ವನಿಸುರಳಿಯ ಕೊಂಡಿ / Hear the song 

ಮುಚ್ಚುಮರೆಯಿಲ್ಲದೆಯೆ ನಿನ್ನಮುಂದೆಲ್ಲವನು ಬಿಚ್ಚಿಡುವೆವೋ ಗುರುವೆ ಅಂತರಾತ್ಮ ।।೨।।
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ ।।೨।।
ಸ್ವೀಕರಿಸು ಓ ಗುರುವೆ ಅಂತರಾತ್ಮ
ಮುಚ್ಚುಮರೆಯಿಲ್ಲದೆಯೆ

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು ಪಾಪತಾನುಳಿಯುವುದೆ ಪಾಪವಾಗಿ ।।೨।।
ಗಂಗೆತಾನುದ್ಭವಿಪ ನಿನ್ನಡಿಯ ಸೋಂಕಿಂಗೆ ।।
ನರಕತಾನುಳಿಯುವುದೆ ನರಕವಾಗಿ
ಮುಚ್ಚುಮರೆಯಿಲ್ಲದೆಯೆ ನಿನ್ನಮುಂದೆಲ್ಲವನು ಬಿಚ್ಚಿಡುವೆವೋ ಗುರುವೆ ಅಂತರಾತ್ಮ
ಮುಚ್ಚುಮರೆಯಿಲ್ಲದೆಯೆ

ಸಾಂತ ರೀತಿಯನೆಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ ಆಆಅ ಆಆಆ ಆಆಆಅ ಆಆ
ಸಾಂತ ರೀತಿಯನೆಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ ಆಆಅ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ ।।೨।।
ನಿನ್ನ ಪ್ರೀತಿಯ ಬೆಳಕನ ಆನಂದಕೊಯ್ಯ್

ಮುಚ್ಚುಮರೆಯಿಲ್ಲದೆಯೆ ನಿನ್ನಮುಂದೆಲ್ಲವನು ಬಿಚ್ಚಿಡುವೆವೋ ಗುರುವೆ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೆ ಅಂತರಾತ್ಮ
ಮುಚ್ಚುಮರೆಯಿಲ್ಲದೆಯೆ

ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ / Sundara dina Sundara Ina Sundara vana

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು  
ಗಾಯಕರು: ಜಿ.ವಿ.ಅತ್ರಿ , ಕೆ.ಎಸ್.ಸುರೇಖ




ಧ್ವನಿಸುರಳಿಯ ಕೊಂಡಿ / Hear the song 



ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ
ಎಳೆಬಿಸಿಲೊಳು ತಿಳಿಗೊಳದೊಳು
ಜಲದಲೆಗಳು ನಲಿನಲಿಯಲು
ನೋಡು ಬಾ ಕೂಡು ಬಾ ಬೇಗ ಬಾ ಬಾಬಾ ।।೨।।
ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ

ತಣ್ನೆಲರಲಿ ಹೂಗಳ ಬಳಿ
ಸೊಕ್ಕಿದ ಅಳಿ ನೋಡು ಬಾ
ಹೊಸತಳಿರೊಳು ಇಂಗೊರಳೊಲು
ಕೋಗಿಲೆಗಳು ಸರಗೈಯಲು
ಹಾಡು ಬಾ ಕೂಡು ಬಾ ಬೇಗ ಬಾ ಬಾಬಾ ।।೨।।
ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ

ಜೊತೆಯಿಲ್ಲದೆ ನನ್ನೊಲಿದೆದೆ ಕಂಪಿಸುತಿದೆ ಕೂಡು ಬಾ
ಹೊಸಹಸುರೆಡೆ ತಿಳಿಗೊಳದೆಡೆ
ನಾ ನಿನ್ನೆಡೆ ನೀ ನನ್ನೆಡೆ
ಕೂಡು ಬಾ ಹಾಡು ಬಾ ಬೇಗ ಬಾ ಬಾಬಾ ।।೨।।

ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ ।।೨।।

Wednesday, January 28, 2015

ಉದಯಿಸುತಿಹನದೊ ಅಭಿನವ ದಿನಮಣಿ / Udayisutihanado Abhinava dinamani

ಸಾಹಿತ್ಯ   : ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ಉದಯಿಸುತಿಹನದೊ ಅಭಿನವ ದಿನಮಣಿ ಸಹ್ಯಾದ್ರಿಯ ಶೃಂಗಾಳಿಯ ಮೇಲೆ
ಹರಿದೋಡಿದೆ ನಿಶೆ, ನಗೆಬೀರಿದೆ ಉಷೆ, ತೀಡುತಲಿದೆ ತಂಗಾಳಿಯ ಲೀಲೆ
ಮಲೆನಾಡನು ಮನಮೋಹಿಸುತಿದೆ ಓ ದಿನಮುಖ ದಿನಕಾಂಚನ ಕಾಂತಿ
ಏಳೇಳಿರಿ ಕರೆಯುತ್ತಿದೆ ಕೇಳಿರಿ, ನವಜೀವನ ಕ್ರಾಂತಿ ಕ್ರಾಂತಿ ಕ್ರಾಂತಿ

ಉದಯಿಸುತಿದೆ ನೂತನ ಯುಗದೇವತೆ ಮಿಥ್ಯೆಯ ಮೌಢ್ಯತೆಯನು ಸೀಳಿ
ಜ್ಞಾನದ ವಿಜ್ಞಾನದ ಮತಿ ಖಡ್ಗದಿ ಮೈದೋರುವಳೈ ನವ ಕಾಳಿ
ಕೆಚ್ಚಿನ ನೆಚ್ಚಿನ ತನುಮನ ಪಟುತೆಯ ಸಂಪಾದಿಸಿ ಮೇಲೇಳಿ
ಕಣ್ದೆರೆಯಿರಿ ನವ ಕಾಂತಿಗೆ ಶಾಂತಿಗೆ ಓ ಕ್ರಾಂತಿಯ ಪುತ್ರರೆ ಬಾಳಿ
ಓ ಕ್ರಾಂತಿಯ ಪುತ್ರರೆ ಬಾಳಿ ಓ ಕ್ರಾಂತಿಯ ಪುತ್ರರೆ ಬಾಳಿ ಓ ಕ್ರಾಂತಿಯ ಪುತ್ರರೆ ಬಾಳಿ

ಓ ನನ್ನ ಚೇತನ ಆಗು ನೀ ಅನಿಕೇತನ / O nanna chetana aagu nee aniketana



ಸಾಹಿತ್ಯ     : ರಾಷ್ಟ್ರಕವಿ ಕುವೆಂಪು   
ಗಾಯಕರು : ಶ್ರೀ ಮೈಸೂರು ಅನಂತಸ್ವಾಮಿ














ಧ್ವನಿಸುರಳಿಯ ಕೊಂಡಿ / Hear the song 

ಓ ನನ್ನ ಚೇತನ ಆಗು ನೀ ಅನಿಕೇತನ 
ಆ ಓ ನನ್ನ ಚೇತನ
ರೂಪ ರೂಪಗಳನು ದಾಟಿ, ನಾಮಕೋಟಿಗಳನು ಮೀಟಿ
ಎದೆಯ ಬಿರೆಯೆ ಭಾವದೀಟಿ ।।೨।।
ಓ ನನ್ನ ಚೇತನ ಆಗು ನೀ ಅನಿಕೇತನ
ಆ ಓ ನನ್ನ ಚೇತನ

ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ ।।೨।।
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ
ಆ ಓ ನನ್ನ ಚೇತನ

ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು
ಕೊನೆಯನೆಂದೂ ಮುಟ್ಟದಿರು ।।೨।।
ಓ ಅನಂತವಾಗಿರು
ಓ ನನ್ನ ಚೇತನ ಆಗು ನೀ ಅನಿಕೇತನ
ಆ ಓ ನನ್ನ ಚೇತನ

ಅನಂತತಾನ್ ಅನಂತವಾಗಿ, ಆಗುತಿಹನೆ ನಿತ್ಯಯೋಗಿ ।।೨।।
ಅನಂತ ನೀ ಅನಂತವಾಗು ।।೨।।
ಆಗು,ಆಗು, ಆಗು,ಆಗು,ಆಗು
ಓ ನನ್ನ ಚೇತನ ಆಗು ನೀ ಅನಿಕೇತನ
ಆ ಓ ನನ್ನ ಚೇತನ

Saturday, January 24, 2015

ಬಾ ಇಲ್ಲಿ ಸಂಭವಿಸು / Baa Illi Sambhavisu

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ 
ಓ ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿಹೆ ಭವಿದೂರ
ಓ ನಿತ್ಯವು ಅವತರಿಪ ಸತ್ಯಾವತಾರ
ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನೆಡೆಗೆ ಕಣ್ಣಾದ ಗುರುವೇ ಭಾರ
ಮೂಡಿ ಬಂದೆನ್ನ ನರರೂಪ ಚೇತನದಿ
ಮೂಡಿ ಬಂದೆನ್ನ ನರರೂಪ ಚೇತನದಿ
ನಾರಯಣತ್ವಕ್ಕೆ ದಾರಿ ತೋರ
ಓ ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಅಂದು ಅರೆಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಿಲಲಿ
ಅಂದು ಅರೆಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಿಲಲಿ
ದೇಶದೇಶದಿ ವೇಷ ವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ ಸುತ್ತಿಲೋಲ
ಚೋದಿಸಿರುವೆಯೊ ಅಂತೆ ಸುತ್ತಿಲೋಲ
ಅವತರಿಸು ಬಾ ಹೇ ಅವತರಿಸು ಬಾ
ಓ ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದಶೀಲ ।।೫।।

Wednesday, January 21, 2015

ಆನಂದಮಯ ಈ ಜಗಹೃದಯ / Aanandamaya Ee Jagahrudaya

ಆನಂದಮಯ ಈ ಜಗಹೃದಯ
ಸಾಹಿತ್ಯ: ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಶಿವಮೊಗ್ಗ ಸುಬ್ಬಣ್ಣ


ಧ್ವನಿಸುರಳಿಯ ಕೊಂಡಿ / Hear the song 



ಆನಂದಮಯ ಈ ಜಗಹೃದಯ; ಏತಕೆ ಭಯ ಮಾಣೊ?
ಸೂರ್ಯೋದಯ ಚಂದ್ರೋದಯ; ದೇವರ ದಯ ಕಾಣೊ
ಆನಂದಮಯ ಈ ಜಗಹೃದಯ

ಬಿಸಿಲಿದು ಬರಿ ಬಿಸಿಲಲ್ಲವೊ; ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ; ಆ ಭ್ರಾಂತಿಯ ಮಾಣೊ
ಬಿಸಿಲಿದು ಬರಿ ಬಿಸಿಲಲ್ಲವೊ; ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ; ಆ ಭ್ರಾಂತಿಯ ಮಾಣೊ

ರವಿವದನವೆ ಶಿವಸದನವೊ; ಬರಿ ಕಣ್ಣದು ಮಣ್ಣೊ
ಶಿವನಿಲ್ಲದೆ ಸೌಂದರ್ಯವೆ; ಶವಮುಖದ ಕಣ್ಣೊ
ರವಿವದನವೆ ಶಿವಸದನವೊ; ಬರಿ ಕಣ್ಣದು ಮಣ್ಣೊ
ಶಿವನಿಲ್ಲದೆ ಸೌಂದರ್ಯವೆ; ಶವಮುಖದ ಕಣ್ಣೊ

ಉದಯದೊಳೇನ್ ಹೃದಯವ ಕಾಣ್; ಅದೇ ಅಮೃತದ ಹಣ್ಣೊ
ಶಿವಕಾಣದೆ ಕವಿ ಕುರುಡನೊ; ಶಿವ ಕಾವ್ಯದ ಕಣ್ಣೊ
ಉದಯದೊಳೇನ್ ಹೃದಯವ ಕಾಣ್; ಅದೇ ಅಮೃತದ ಹಣ್ಣೊ
ಶಿವಕಾಣದೆ ಕವಿ ಕುರುಡನೊ; ಶಿವ ಕಾವ್ಯದ ಕಣ್ಣೊ

ಆನಂದಮಯ ಈ ಜಗಹೃದಯ; ಏತಕೆ ಭಯ ಮಾಣೊ?
ಸೂರ್ಯೋದಯ ಚಂದ್ರೋದಯ; ದೇವರ ದಯ ಕಾಣೊ
ಆನಂದಮಯ ಈ ಜಗಹೃದಯ