Monday, August 19, 2013

ಸೋಲೆ ಗೆಲುವೆಂದು ಅರಿತಾದ ಮೇಲೆ / Sole geluvendu aritaada mele

ಸಾಹಿತ್ಯ:  ಗೀತಪ್ರಿಯ (ಲಕ್ಷ್ಮಣ್ ರಾವ್ ಮೊಹಿತೆ)
ಗಾಯಕರು: ಡಾ.ರಾಜ್ ಕುಮಾರ
ಚಲನಚಿತ್ರ: ಒಡಹುಟ್ಟಿದವರು




ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ದೇಹವ ಸವೆಸುತ ಪರಿಮಳ ಕೊಡುವ ಗಂಧವು ನೋವಿಗೆ ನರಳುವುದೇ
ತನ್ನನೆ ದಹಿಸುತ ಬೆಳಕನು ತರುವ ದೀಪವು ಅಳಲನು ಹೇಳುವುದೇ
ನಿನ್ನಯ ಸಹನೆಗೆ ಹೋಲಿಕೆ ಧರೆಯು, ಕರುಣೆಯು ನಿನ್ನಲ್ಲಿ ಮೈದುಂಬಿರಲು ಈ ಜನ್ಮ ಸಾರ್ಥಕವು
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ಗಾಳಿಯ ಭೀಕರ ದಾಳಿಗೆ ಪರ್ವತ ಸ್ಥೈರ್ಯವನೆಂದಿಗೂ ಕಳೆಯುವುದೇ
ಸುಖಸಂಸಾರಕೆ ದುಡಿಯುವ ಹೆಣ್ಣು ಸ್ವಾರ್ಥಕೆ ಮನಸನು ನೀಡುವಳೇ              
ನಿಂದನೆ ಮಾತಿಗೆ ಕುಂದದೆ ಇರುವ ಮಮತೆ ಮೂರ್ತಿಯೆ ನೀನಾಗಿರಲು  ಜೀವನ ಪಾವನವು
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

Wednesday, August 14, 2013

ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ / Saayutide nimma nudi O Kannadada kandarira

ಸಾಹಿತ್ಯ: ಕುವೆಂಪು
ಗಾಯಕರು: ಹೇಮಂತ್, ಬಿ.ಜೆ ಭರತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ




ಸಾಯುತಿದೆ ನಿಮ್ಮ ನುಡಿ  ಓ ಕನ್ನಡದ ಕಂದರಿರ 
ಸಾಯುತಿದೆ ನಿಮ್ಮ ನುಡಿ ಕನ್ನಡದ ಕಂದರಿರ

ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ       
ರಾಜನುಡಿಯೆಂದೊಂದು ರಾಷ್ಟ್ರನುಡಿಯೆಂದೊಂದು ದೇವನುಡಿಯೆಂದೊಂದು ಹತ್ತಿ ಜಗ್ಗಿ 
ನಿರಿನಿಟಿಲು ನಿಟಿಲೆಂದು ಮುರಿಮೂಳೆ ಮುರಿಯುತಿದೆ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ 
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ 
ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ 

ಕೂಗಿಕೊಳ್ಳಲು ಕೂಡ ಬಲವಿಲ್ಲ ಮಕ್ಕಳೇ ಬಾಯ್ಮುಚ್ಚಿ ಹಿಡಿದಿಹರು ಕೆಲರು ನುಗ್ಗಿ ॥೨॥
ತಾಯಿತ್ತ ಮೊಲೆ ಹಾಲೆ ನಿಮ್ಮ ಮೈಗಾಗದಿರೆ ಹೊತ್ತ ಹೊರೆ ಬಲಕಾರಿನೆತ್ತರಹುದೆ ॥೨॥ 
ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ 
ಸಾಯುತಿದೆ ನಿಮ್ಮ ನುಡಿ

ಕಣ್ದೆರೆಯಿರೆಳಿವೊ ಕನ್ನಡದ ಮಕ್ಕಳಿರ  ...... 
ಕಣ್ದೆರೆಯಿರೆಳಿವೊ ಕನ್ನಡದ ಮಕ್ಕಳಿರ
ಘರ್ಜಿಸುವುದನು ಕಲಿತು ಸಿಂಹವಾಗಿ 
ನಖದಾಷ್ಟ್ರ ಕೇಸರಂಗಳ ಬೆಳಸಿ ಹುರಿಗೊಂಡು, ಶಿರವೆತ್ತಿ ನಿಂತು ಗುರಿತನವನೀಗಿ 
ಶಿರವೆತ್ತಿ ನಿಂತು ಗುರಿತನವನೀಗಿ, ಶಿರವೆತ್ತಿ ನಿಂತು ಗುರಿತನವನೀಗಿ .......... 

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು / Ellige naa hodarallige baruvanu amma chandira nannavanu

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು
ಸಾಹಿತ್ಯ    : ರಾಷ್ಟ್ರಕವಿ ಕುವೆಂಪು  
ಗಾಯಕರು: ರಮ್ಯ ವಸಿಷ್ಠ, 
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ನಿನ್ನವನಾನಾಗಿರುವುದರಿಂದ ಹಾ
ನಿನ್ನವನಾನಾಗಿರುವುದರಿಂದ ಅಮ್ಮ ಚಂದಿರ ನಿನ್ನವನು, ಅಮ್ಮ ಚಂದಿರ ನಿನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥

ನಮ್ಮನೆಯಂಗಳದಲ್ಲಾಡುತಿರೆ ನೆತ್ತಿಯ ಮೇಲೆ ತೋರುವನು ॥೨॥
ಮಾವನ ಮನೆಯೊಳಗುಳಿಯಲು ಅಲ್ಲಿಗೂ ಬರುವನು ಚಂದಿರುನು ॥೨॥
ಅಲ್ಲಿಗೂ ಬರುವನು ಚಂದಿರುನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥

ನೆರೆಮನೆ ಕಿಟ್ಟು ಕರೆದರೆ ಹೊಗನು ಮೂರ್ತಿಯನೆಂದು ಬಿಟ್ಟಿರನು ॥೨॥
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನಿನ್ನವನು ॥೨॥
ಅಮ್ಮ ಚಂದಿರ ನನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ನಿನ್ನವನಾನಾಗಿರುವುದರಿಂದ ಹಾ
ನಿನ್ನವನಾನಾಗಿರುವುದರಿಂದ ಅಮ್ಮ ಚಂದಿರ ನಿನ್ನವನು, ಅಮ್ಮ ಚಂದಿರ ನಿನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನಿನ್ನವನು ಅಮ್ಮ ಚಂದಿರ ನನ್ನವನು