Thursday, September 3, 2020

ಬಾರಯ್ಯ ಮನೆಗೆ ರಂಗಯ್ಯ ನೀನು / Barayya manege rangayya ninu

ಸಾಹಿತ್ಯ     : ಶ್ರೀ ಪುರಂದರದಾಸರು
ಗಾಯಕರು : ಕು|| ದ್ಯುತಿ ಜಾಗೀರ್ದಾರ್ & ಕು|| ಸ್ನಿಗ್ಧ ಜಾಗೀರ್ದಾರ್
  

ಧ್ವನಿಸುರಳಿಯ ಕೊಂಡಿ / Hear the song 


ಬಾರಯ್ಯ ಮನೆಗೆ ರಂಗಯ್ಯ ನೀನು                         || ಪ ||

 

ಬಾರಯ್ಯ ಮನೆಗೆ ಬಾಲಗೋಪಾಲ

ಜಾರ ಚೋರ ಕೃಷ್ಣ ಜಾನಕಿ ಪತಿ ರಾಮ                    || ಅ.ಪ ||

 

ನಂದನಂದನ ನವನೀತಚೋರ ಕೃಷ್ಣ

ಮಂದರೋದ್ಧಾರನೆ ಮಾಧವರಾಯರ ರಾಮ            || ೧ ||

 

ಗೋಕುಲದಲ್ಲಿ ಗೋಪಿಯರ ಕೂಡಿ    

ಲೋಕ ನೋಡಲವರ ಕಾಕು ಮಾಡಿ                        || ೨ ||

 

ಪಳ್ಳಿಪಳ್ಳಿಯೊಳೆಲ್ಲ ಮೊಸರು ಹಾಲು ಬೆಣ್ಣೆ

ಕೊಳ್ಳೆಯಾಡಿ ಗೋಪಿ ಮುಡಿಯನ್ನೇ ಪಿಡಿದ ಕೃಷ್ಣ         || ೩ ||

 

ಅನಂತಪದ್ಮನಾಭ ಅಪ್ರಮೇಯ ಹೃಷಿಕೇಶ

ದಾನವಾಂತಕ ರಂಗ ದಶರಥ ಪುತ್ರ ರಾಮ             || ೪ ||

 

ಪರಮಪವಿತ್ರ ರಾಮ ಭದ್ರಾಚಲಾಧೀಶ

ವರದ ಶ್ರೀಪುರಂದರವಿಠ್ಠಲನೇ ರಾಮ                     || ೫ ||


ಭಾವಾರ್ಥ:

ಶ್ರೀ ಪುರಂದರದಾಸರು ಭದ್ರಾಚಲಕ್ಷೇತ್ರವನ್ನು ಸಂದರ್ಶಿಸಿದಾಗ

 ರಚಿಸಿದ ಶ್ರೀರಾಮದೇವರ ಪದವಿದು         

                   ಜಾರ : ಇದು ಮೂಲತಃ ಸಂಸ್ಕೃತ ಪದ

                             ಮೂಲಾರ್ಥ "ಪ್ರಿಯ, ಆಪ್ತಸ್ನೇಹಿತ"

  ಜಾರ ಚೋರ ಕೃಷ್ಣ  : ಪ್ರಿಯ ಕಳ್ಳ ಕೃಷ್ಣ

                  ನಂದ : ಕೃಷ್ಣನ ಸಾಕು ತಂದೆ

               ನಂದನ : ಮಗ

       ನಂದನಂದನ : ಕೃಷ್ಣ

             ನವನೀತ : ಬೆಣ್ಣೆ

     ನವನೀತಚೋರ : ಬೆಣ್ಣೆ ಕಳ್ಳ

 ಮಂದರೋದ್ಧಾರನೆ : ಕೂರ್ಮಾವತಾರಿ

                          : ಸಮುದ್ರ ಮಂಥನಕ್ಕಾಗಿ ಮಂದರ   

                            ಪರ್ವತವನ್ನು ಎತ್ತಿದವನು

ಮಾಧವರಾಯ ರಾಮ –

                    ಮಾ : ರಮಾ

                    ಧವ : ಎಜಮಾನ

                  ರಾಮ : ಸುಂದರ 


                   ಕಾಕು : ವ್ಯಂಗ್ಯ , ತಮಾಷೆ

                    ಪಳ್ಳಿ : ಹಳ್ಳಿ

                  ಕೊಳ್ಳೆ : ಕದ್ದು, ಕಳುವು 


  ಅನಂತಪದ್ಮನಾಭ :

               ಅನಂತ : ಕೊನೆಯಿಲ್ಲದವ, ವಿಷ್ಣು

                   ಪದ್ಮ : ಕಮಲ

                  ನಾಭ : ಹೊಕ್ಕಳು

            ಪದ್ಮನಾಭ : ಕಮಲನಾಭ

ಪದ್ಮನಾಭಃ ಪ್ರಜಾಪತಿಃ ಇತಿ: 

ಹಿರಣ್ಯನಾಭಃ ಇತಿ : ಚಿನ್ನದ ಮೊಟ್ಟೆಯಂತಿರುವ ಕಮಲವನ್ನು ತನ್ನ ನಾಭಿಯಲ್ಲಿ ಹೊತ್ತವನು

ಯಾರ ನಾಭಿಯಿಂದ ಬ್ರಹ್ಮಾಂಡದ ಕಮಲವು 

ಹೊರಹೊಮ್ಮಿತೋ ಅವನೇ ಪದ್ಮನಾಭ

 

ಋಗ್ವೇದದ ವಿಶ್ವಕರ್ಮಸೂಕ್ತದಲ್ಲಿ ...

ಅಜಸ್ಯ ನಾಮೌ ಅಧಿ ಏಕಮರ್ಪಿತಮ್

ಎಸ್ಮಿನ್ ವಿಶ್ವಃ ಭುವನಾನಿ ತಸ್ಥುಃ

 

ಅಜ : ಎಂದೂ ಹುಟ್ಟದವನು

ಎಂದೂ ಹುಟ್ಟದವನ ಹೊಕ್ಕಳಲ್ಲಿ ಒಂದು ಹುಟ್ಟಿತು ..

ಏನು ಹುಟ್ಟಿತು ? ಅದೇ ಬ್ರಹ್ಮಾಂಡ ..

ಆ ಒಂದರಲ್ಲಿ ಇಡೀ ವಿಶ್ವಾತ್ಮಕವಾದ ಕಮಲ ಒಳಗೊಂಡಿತ್ತು

 

ಪ್ರಳಯಕಾಲದಲ್ಲಿ ಹೊತ್ತವನೂ ನೀನೇ

ಈ ಬ್ರಹ್ಮಾಂಡವೆಂಬ ಕಮಲವನ್ನು ನಾಭಿಯಿಂದ ಹೆತ್ತವನೂ ನೀನೇ

ತ್ವಮೇವ ಮಾತಾ ಚ ಪಿತಾ ತ್ವಮೇವ

ಮಾತಾ ಚ ನಿರ್ಮಾತ

ಮಾತಾ ನರಸಿಂಹಶ್ಚ ಪಿತಾ ನರಸಿಂಹಃ

ಭ್ರಾತ ನರಸಿಂಹಶ್ಚ ಸಖಾ ನರಸಿಂಹಃ

ವಿದ್ಯಾ ನರಸಿಂಹಶ್ಚ ದ್ರವಿಣಂ ನರಸಿಂಹಃ

 

ಜಗತ್ತಿನ ತಾಯಿ ತಂದೆ

ಮೇಲೆ ಹೇಳಿರುವ ಎಲ್ಲವೂ ಪದ್ಮನಾಭ ಎಂಬ ಶಬ್ಧಕೆ ಮೂಲಾರ್ಥ


        ಅಪ್ರಮೇಯ : ಅಳತೆಗೆ ಮೀರಿದ, ಪ್ರಮಾಣಗಳಿಗೆ ನಿಲುಕದವನು;ವಿಷ್ಣು ಪರಮಾತ್ಮ

           ಹೃಷಿಕೇಶ  : ಜ್ಞಾನೇಂದ್ರಿಯಗಳ ಒಡೆಯ, ವಿಷ್ಣು ಪರಮಾತ್ಮ

              ಹೃಷೀಕ  : ಜ್ಞಾನೇಂದ್ರಿಯಗಳು 

      ದಾನವಾಂತಕ : ರಾವಣನನ್ನು ಸಂಹರಿಸಿದವನು

   ಭದ್ರಾಚಲಾಧೀಶ : ವನವಾಸದ ಸಮಯದಲ್ಲಿ ಭದ್ರಾಚಲವೆಂಬ ನಗರದಲ್ಲಿ ನೆಲೆಸಿದ್ದ ರಾಮ


  **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**

                                    
                                     ***  ಜೈ ಶ್ರೀರಾಮ್ ***

===================================================


Saahitya  : Sri Purandaradaasaru  Snigdha 
Singer      : Dyuthi Jahagirdhar & Snigdha Jahagirdhar

bArayya manege rangayya nInu                      || pa ||

bArayya manege bAlagopAla
jAra chora kRiShNa jAnaki pati rAma                      ||
a.pa ||

nandanandana navanItachora kRiShNa
mandaroddhArane mAdhavarAyara rAma             ||
1 ||
    
gokuladalli gopiyara kUDi
loka noDalavara kAku mADi                                       ||
2 ||

paLLipaLLiyoLella mosaru hAlu beNNe
koLLeyADi gopi muDiyanne piDida kRiShNa.        ||
3 ||

anaMtapadmanAbha aprameya hRiShikesha
dAnavAntaka ranga dasharatha putra rAma         ||
4 ||

paramapavitra rAma bhadrAchalAdhIsha
varada shrI purandara viTThalane rAma               ||
5 ||


                          ***  Jai Sri Ram ***

1 comment:

  1. ಸುಂದರ ಮಾಹಿತಿ...ಅಭಿನಂದನೆಗಳು ನಿನ್ನ ಪರಿಶ್ರಮಕ್ಕೆ ಗಿರಿ

    ReplyDelete