Monday, November 26, 2018

ಇಷ್ಟು ದಿನ ಈ ವೈಕುಂಠ / Ishtu dina ee Vaikunta

ಸಾಹಿತ್ಯ    : ಶ್ರೀ ಕನಕದಾಸರು  
ಗಾಯಕರು: ಶ್ರೀ ವಿದ್ಯಾಭೂಷಣ 


ಇಷ್ಟು ದಿನ ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ಇಷ್ಟು ದಿನ ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ದೃಷ್ಟಿಯಿಂದಲಿ ನಾನು ಕಂಡೆ 
ದೃಷ್ಟಿಯಿಂದಲಿ ನಾನು ಕಂಡೆ 
ಶೃಷ್ಟಿಗೀಶನೆ ಶ್ರೀರಂಗ ಶಾಯಿ 
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ದೃಷ್ಟಿಯಿಂದಲಿ ನಾನು ಕಂಡೆ 

ಎಂಟು ಏಳನು ಕಳೆದುದರಿಂದೆ ಬಂಟರೈರವ ತುಳಿದುದರಿಂದೆ  
ಎಂಟು ಏಳನು ಕಳೆದುದರಿಂದೆ, ಬಂಟರೈರವ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ  
ತುಂಟಕನೊಬ್ಬನ ತರಿದುದರಿಂದೆ  
ಬಂಟನಾಗಿ ಬಂದೆನೋ ರಂಗಶಾಯಿ
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ದೃಷ್ಟಿಯಿಂದಲಿ ನಾನು ಕಂಡೆ 

ವಜ್ರವೈಡೂರ್ಯದ ತೊಲೆಗಳ ಕಂಡೆ, ಪ್ರಜ್ವಲಿಪ ಮಹಾದ್ವಾರವ ಕಂಡೆ 
ವಜ್ರವೈಡೂರ್ಯದ ತೊಲೆಗಳ ಕಂಡೆ, ಪ್ರಜ್ವಲಿಪ ಮಹಾದ್ವಾರವ ಕಂಡೆ 
ನಿರ್ಜರಾದಿ ಮುನಿಗಳನಾ ಕಂಡೆ 
ನಿರ್ಜರಾದಿ ಮುನಿಗಳನಾ ಕಂಡೆ 
ದುರ್ಜನಾಂತಕನೆ ಶ್ರೀರಂಗಶಾಯಿ 
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ 

ರಂಭೆ ಊರ್ವಷಿ ಮೇಳವ ಕಂಡೆ, ತುಂಬುರು ಮುನಿನಾರದರನು ಕಂಡೆ 
ರಂಭೆ ಊರ್ವಷಿ ಮೇಳವ ಕಂಡೆ, ತುಂಬುರು ಮುನಿನಾರದರನು ಕಂಡೆ 
ಅಂಬುಜೋದ್ಭವ ರುದ್ರರ ಕಂಡೆ  
ಅಂಬುಜೋದ್ಭವ ರುದ್ರರ ಕಂಡೆ  
ಶಂಬರಾರಿಪಿತನೆ ರಂಗಶಾಯಿ 
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ 

ನಾಗಶಯನನ ಮೂರುತಿ ಕಂಡೆ, ಭೋಗಿಭೂಷಣ ಶಿವನನು ಕಂಡೆ 
ನಾಗಶಯನನ ಮೂರುತಿ ಕಂಡೆ, ಭೋಗಿಭೂಷಣ ಶಿವನನು ಕಂಡೆ 
ಭಾಘವತರ ಸಮ್ಮೇಳವ ಕಂಡೆ
ಭಾಘವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವನ ನಾ ಕಂಡೆ 
ಇಷ್ಟು ದಿನ ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ದೃಷ್ಟಿಯಿಂದಲಿ ನಾನು ಕಂಡೆ 
ಶೃಷ್ಟಿಗೀಶನೆ ಶ್ರೀರಂಗ ಶಾಯಿ 
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ......  


ನಿರ್ಜರ : ಮುಪ್ಪಿಲ್ಲದವರು 
ಅಂಬುಜ : ಕಮಲ


No comments:

Post a Comment