Thursday, November 22, 2018

ಪವಮಾನ ಪವಮಾನ / Pavamaana Pavamaana

ಸಾಹಿತ್ಯ    : ಶ್ರೀ ವಿಜಯ ದಾಸರು 
ಗಾಯಕರು: ಶ್ರೀ ಪುತ್ತೂರು ನರಸಿಂಹ ನಾಯಕ್



ಪವಮಾನ.....  ಪವಮಾನ ....
ಪವಮಾನ ಪವಮಾನ ಪವಮಾನ ಜಗದಪ್ರಾಣ
ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಜನಪ್ರಿಯ
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ಹೇಮ ಕಚ್ಚುಟ, ಉಪವೀತ ಧರಿಪ ಮಾರುತ,
ಕಾಮಾದಿ ವರ್ಗರಹಿತ, ಕಾಮಾದಿ ವರ್ಗರಹಿತ
ವ್ಯೊಮಾದಿ ಸರ್ವವ್ಯಾಪುತ, ಸತತ ನಿರ್ಭೀತ,
ರಾಮಚಂದ್ರನ ನಿಜದೂತ ರಾಮಚಂದ್ರನ ನಿಜದೂತ

ಯಾಮಯಾಮಕೆ ನಿನ್ನಾರಧಿಪುದಕೆ,
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ,
ಪಾಮರ ಮತಿಯನು ನೀ ಮಾಣಿಪುದು
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ವಜ್ರ ಶರೀರ ಗಂಭೀರ,
ಮುಕುಟಧರ ದುರ್ಜನವನ ಕುಠಾರ, ದುರ್ಜನವನ ಕುಠಾರ
ನಿರ್ಜರಮಣಿ ದಯಪಾರ, ವಾರ ಉದಾರ,
ಸಜ್ಜನರಘ ಪರಿಹಾರ, ಸಜ್ಜನರಘ ಪರಿಹಾರ

ಅರ್ಜುನಗೋಲಿದಂದು ಧ್ವಜವಾನಿಸಿ, ನಿಂದು ಮೂರ್ಜಗವರಿವಂತೆ ಘರ್ಜನೆ ಮಾಡಿದೆ
ಹೆಜ್ಜೆಹೆಜ್ಜೆಗೆ ನಿನಬ್ಜಪಾದದ ಧೂಳಿ ಮಜ್ಜನದಲಿ ಭವವರ್ಜಿತವೆನಿಸೋ
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ಪ್ರಾಣ ಪಾನ ವ್ಯಾನ ಉದಾನ ಸಮಾನ
ಆನಂದಭಾರತಿರಮಣ, ಆನಂದಭಾರತಿರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ,
ಜ್ಞಾನಧನ ಪಾಲಿಪವರೇಣ್ಯ,  ಜ್ಞಾನಧನ ಪಾಲಿಪವರೇಣ್ಯ

ನಾನು ನಿರುತದಲಿ ಏನೇನೆಸಗುವೆ, ಮಾನಸಾದಿ ಕರ್ಮ ನಿನಗೊಪ್ಪಿಸಿದೆನು
ಪ್ರಾಣನಾಥ ಸಿರಿ ವಿಜಯ ವಿಠ್ಠಲನ
ವಿಠ್ಠಲ... , ವಿಠ್ಠಲ.... ವಿಠ್ಠಲ...
ಪ್ರಾಣನಾಥ ಸಿರಿ ವಿಜಯ ವಿಠ್ಠಲನ, ಕಾಣಿಸಿ ಕೊಡುವುದು ವಿಜಯಪ್ರಕಾಶ
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಜನಪ್ರಿಯ
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ಪವಮಾನ ...ಪವಮಾನ..  ಪವಮಾನ


ಕ್ಲಿಷ್ಟ ಪದಗಳ ಅರ್ಥ :

ಕಚ್ಚುಟ     : ಲಂಗೋಟಿ
ವ್ಯೋಮ    : ಆಕಾಶ, ವಾಯುಮಂಡಲ
ಮಾರುತ   : ಗಾಳಿ
ಯಾಮ    : ಕಾವಲು, ಪಹರೆ, ಕಾವಲುಗಾರರ ಠಾಣೆ
ಪಾಮರ    : ತಿಳಿವಳಿಕೆಯಿಲ್ಲದವನು, ದಡ್ಡ, ಮೂಢ ಅಲ್ಪನಾದವನು, ನೀಚ ,ತುಚ್ಛ
ಮಾಣಿಪು  : ಕುಗ್ಗಿಸು, ತಗ್ಗಿಸು ಸುಮ್ಮನಿರಿಸು, ನಿಷ್ಕ್ರಿಯಗೊಳಿಸು
ಕುಠಾರ     : ಕೊಡಲಿ
ನಿರ್ಜರ     : ಮುಪ್ಪಿಲ್ಲದವನು, ದೇವತೆ
ಅಬ್ಜ         : ತಾವರೆ
ವ್ಯಾನ        : ಪಂಚಪ್ರಾಣಗಳಲ್ಲಿ ಒಂದು
ನಿರುತದಲಿ : ಆತ್ಮಭಾವದಲಿ

2 comments: